ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೈಕಿನಲ್ಲಿ ಹೆಚ್ಚೆಂದರೆ ಇಂತಿಷ್ಟು ಕಿ.ಮೀ. ಸಂಚರಿಸಬಹುದು. ಅಷ್ಟೊತ್ತಿಗೆ ಅಬ್ಬಬ್ಬ ಸಾಕೆನಿಸುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬೈಕಿನಲ್ಲೇ 33 ರಾಜ್ಯ, 3 ದೇಶಗಳನ್ನು ಸಂಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಯಾಣದ ಹಿಂದಿನ ಕಾರ್ಯವೂ ಅಷ್ಟೇ ಸೊಗಸಾಗಿದೆ.
ಪ್ರಯಾಣ ಮುಗಿಸಿ ಶಿವಮೊಗ್ಗಕ್ಕೆ ಆಗಮಿಸಿರುವ ವಿಜು ವರ್ಗಿಸ್ (viju varghese) ಮಾಧ್ಯಮದವರೊಂದಿಗೆ ಮಾತನಾಡಿ ಪ್ರಯಾಣದುದ್ದಕ್ಕೂ ಎದುರಿಸಿದ ಸವಾಲುಗಳನ್ನು ಒಂದೊಂದೆ ಹಂಚಿಕೊಂಡರು.
ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಟ್ರಸ್ಟ್ (guddekal balasubramanya swamy trust) ವತಿಯಿಂದ ವಿಜುಗೆ ಸನ್ಮಾನಿಸಲಾಯಿತು. ಹಾಗೂ ಇದೇ ವೇಳೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ (G.K.Mithun Kumar) ಅವರು ಸನ್ಮಾನಿಸಿದರು.
READ | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?
ಬೈಕ್ ಸವಾರಿ ಹಿಂದಿನ ಕಾರಣವೇನು?
“ನಾವೆಲ್ಲ ಭಾರತೀಯರು ಎಂಬ ಉದ್ದೇಶದಿಂದ ನಾನು 33 ರಾಜ್ಯಗಳಿಗೆ ಪ್ರವಾಸ ಮಾಡಿದ್ದೆ. ಆ ಎಲ್ಲ ರಾಜ್ಯಗಳಿಂದ ಅಲ್ಲಿನ ಮಣ್ಣು (soil) ಮತ್ತು ನೀರನ್ನು (water) ಸಂಗ್ರಹಿಸುವುದು ನನ್ನ ಉದ್ದೇಶವಾಗಿತ್ತು. ಇದಕ್ಕೆ ಪೂರಕವಾಗಿ ನಾನು ಪ್ರವಾಸಕ್ಕೆ ಹೊರಟಾಗ (balasubramanya temple) ಬಾಲಸುಬ್ಯಹ್ಮಣ್ಯ ದೇವಸ್ಥಾನ ಸಮಿತಿಯವರು ನಾವು ವಿಶ್ವದಲ್ಲಿಯೇ ಅತಿ ಎತ್ತರವಾದ ಬಾಲಸುಬ್ಯಹ್ಮಣ್ಯ ವಿಗ್ರಹವನ್ನು (world tallest statue) ನಿರ್ಮಿಸಲು ಉದ್ದೇಶಿಸಿದ್ದೇವೆ. ಈ ಮಹತ್ಕಾರ್ಯಕ್ಕೆ ತಾವು ವಿವಿಧ ರಾಜ್ಯಗಳಿಂದ ಸಂಗ್ರಹಿಸಿದ ಮಣ್ಣು, ನೀರನ್ನು ನೀಡಬೇಕು ಎಂದು ಸಲಹೆ ಮಾಡಿದ್ದರು. ಅವರ ಸಲಹೆಯಂತೆ ದೇವಸ್ಥಾನಕ್ಕೆ ಇಂದು ಮಣ್ಣು ಮತ್ತು ನೀರನ್ನು ನೀಡಿದ್ದೇನೆ” ಎಂದರು.
“ಸುಮಾರು 80 ದಿನಗಳ ಕಾಲ 24,600 ಕಿಮೀ. ಪ್ರಯಾಣ ಮಾಡಿದ್ದೇನೆ. ಸಮಾನತೆ, ರಾಷ್ಟ್ರೀಯತೆ, ಏಕತೆಯ ಉದ್ದೇಶ ಇಟ್ಟುಕೊಂಡು ಈ ಪ್ರವಾಸ ಮಾಡಿರುವೆ. ಮನುಷ್ಯ ಏನೇ ಆದರೂ ಕೊನೆಗೆ ಅವನಿಗೆ ಬೇಕಾಗಿರುವುದು ಮಣ್ಣು. ಹಾಗಾಗಿ ಈ ಮಣ್ಣಿನ ಮಹತ್ವವನ್ನು ಸಾರುವುದರ ಜೊತೆಗೆ ರಾಷ್ಟ್ರೀಯತೆಯನ್ನು ಮೂಡಿಸುವುದು ಇದರ ಉದ್ದೇಶವಾಗಿತ್ತು” ಎಂದು ಅಭಿಪ್ರಾಯಪಟ್ಟರು.
₹10 ಕೋಟಿ ವೆಚ್ಚದಲ್ಲಿ ವಿಶ್ವದ ಎತ್ತರದ ಮಿರುಗನ್ ಮೂರ್ತಿ
ಶ್ರೀ ಬಾಲಸುಬ್ಯಹ್ಮಣ್ಯ ಸ್ವಾಮಿ ಸೇವಾ ಸಮಿತಿಯ ಶಿವಕುಮಾರ್ ಮಾತನಾಡಿ, “ಒಂದು ಒಳ್ಳೆಯ ಉದ್ದೇಶದಿಂದ ರಿಪ್ಪನ್ಪೇಟೆಯವರಾದ ವಿಜು ವರ್ಗಿಸ್ ಅವರು ಬೈಕ್ನಲ್ಲಿ ದೇಶ ವಿದೇಶಗಳಲ್ಲಿ ಪ್ರವಾಸ ಮಾಡಿ ಬಂದಿದ್ದಾರೆ. ಅವರು ಪ್ರವಾಸ ಮಾಡಿದ ರಾಜ್ಯಗಳಿಂದ ಮಣ್ಣು ಮತ್ತು ನೀರನ್ನು ನಮಗೆ ನೀಡಿದ್ದಾರೆ. ದೇವಸ್ಥಾನ ಟ್ರಸ್ಟ್ ಮತ್ತು ಸೇವಾ ಸಮಿತಿ ವತಿಯಿಂದ ಸುಮಾರು ₹10 ಕೋಟಿ ವೆಚ್ಚದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ 151 ಅಡಿ ಎತ್ತರದ ಮುರುಗನ್ ಮೂರ್ತಿಯನ್ನು ಸ್ಥಾಪಿಸಲು ನಾವು ಉದ್ದೇಶ ಹೊಂದಿದ್ದು, ಅದಕ್ಕಾಗಿ ಮಣ್ಣು ಮತ್ತು ನೀರನ್ನು ಬಳಸಿಕೊಳ್ಳುತ್ತೇವೆ” ಎಂದು ಹೇಳಿದರು.
ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ರಾಜಶೇಖರಪ್ಪ, ಉಪಾಧ್ಯಕ್ಷ ಎಂ.ಪಿ. ಸಂಪತ್, ಕಾರ್ಯದರ್ಶಿ ಬಿ.ರಘುಕುಮಾರ್, ಸಹ ಕಾರ್ಯದರ್ಶಿ ಲೋಕೇಶ್, ಟ್ರಸ್ಟಿಗಳಾದ ಪಿ.ರವಿ, ಎಂ.ಬಿ. ಗಣೇಶ್, ಕೆ. ಸುಬ್ಯಮಣಿ, ಶಿವಕುಮಾರ್, ಎ.ವಿಜಯನ್, ಅರ್ಜುನ್ ಮೇಸ್ತ್ರಿ ಉಪಸ್ಥಿತರಿದ್ದರು.
Night rounds | ಚುಮುಚುಮು ಚಳಿಯಲ್ಲೇ ಪಾಲಿಕೆ ಆಯುಕ್ತರಿಂದ ಬೈಕಿನಲ್ಲೇ ನೈಟ್ ರೌಂಡ್ಸ್, ತೆರವು ಕಾರ್ಯಾಚರಣೆ ವೀಕ್ಷಣೆ