ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಬಹುಭಾಷ ನಟ, ಚಿಂತಕ ಪ್ರಕಾಶ್ ರಾಜ್ (Prakash raj) ಮಾತನಾಡಿದರು.
ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಭಾಗ್ಯಗಳಾಗಿವೆ. ರಾಜ್ಯದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರದ್ದು ರಾಜಕೀಯ ಹೇಳಿಕೆಯಷ್ಟೆ. ಅವರು ಹೇಳಿದ್ದನ್ನು ಕೇಳಬೇಕು ಎನ್ನಲು ಅವರೇನು ದೇವರಲ್ಲ ಎಂದರು.
READ | ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಚಿರತೆ ಅಟ್ಯಾಕ್, ಹುಡುಕಲು ಹೋದಾಗ ಶವ ಪತ್ತೆ, ಅರಣ್ಯಾಧಿಕಾರಿಗಳೇನು ಹೇಳಿದರು?
ಪ್ರಕಾಶ್ ರಾಜ್ ಆರೋಪಗಳಿವು
- ಮೋದಿ ಅವರು ತಂದ ಯೋಜನೆಗಳೆಲ್ಲ ಏನಾಗಿವೆ ಎಂಬುದನ್ನು ಮೊದಲು ಜನರಿಗೆ ತಿಳಿಸಲಿ, ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಭಾಗ್ಯಗಳು. ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಸಬಲವಾಗುವುದಲ್ಲದೆ ಆರ್ಥಿಕ ಅಭಿವೃದ್ಧಿಯೂ ಆಗಲಿದೆ. ರಾಜ್ಯ ದಿವಾಳಿ ಆಗುತ್ತದೆ ಎನ್ನುವ ನರೇಂದ್ರ ಮೋದಿ, ಅವರು ತಂದ ಯೋಜನೆಗಳಿಂದ ದೇಶ ಏನಾಗಿದೆ ಎಂಬುದಕ್ಕೆ ಉತ್ತರ ಕೊಡಲಿ.
- ದೇಶದಲ್ಲಿ ಧರ್ಮದ ಕುರಿತು ಮಾತನಾಡುವುದು ರಾಜಕಾರಣಿಗಳ ಕೆಲಸವಲ್ಲ. ಅವರು ಆಡಳಿತ ನಡೆಸಬೇಕು. ಸಾಮಾನ್ಯ ಜನರಿಗೆ ಧರ್ಮದ ಕುರಿತ ಯಾವ ಭಿನ್ನಾಭಿಪ್ರಾಯಗಳೂ ಇಲ್ಲ. ಇದನ್ನು ಮಾಡುವವರು ರಾಜಕಾರಣಿಗಳು.
- ಹಿಂಸೆಯು ಯಾವುದೇ ಧರ್ಮದ ಭಾಗವಲ್ಲ. ಧರ್ಮದ ಹೆಸರಲ್ಲಿ ಹಿಂಸೆಯನ್ನು ವಿರೋಧಿಸಿದ ಮಾತ್ರಕ್ಕೆ ನಾನು ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತದೆಯೇ ಹೊರತು ನನಗೂ ಧರ್ಮ ಬೇಕು, ಅದು ನನ್ನ ಆಯ್ಕೆ, ಪ್ರಶ್ನೆಗಳನ್ನು ಎತ್ತಿದ ತಕ್ಷಣ ನನ್ನನ್ನು ಹಿಂದೂ ವಿರೋಧಿ ಮಾಡುವುದು ಯಾಕೆ?
- ದೇಹಕ್ಕಾದ ಗಾಯಗಳು ನಾವು ಸುಮ್ಮನಿದ್ದರೂ ಮಾಯುತ್ತವೆ. ಆದರೆ ದೇಶಕ್ಕಾದ ಗಾಯಗಳು ಸುಮ್ಮನಿದ್ದರೆ ಹೆಚ್ಚಾಗುತ್ತವೆ. ಈ ಕಾರಣಕ್ಕಾಗಿಯೇ ಪ್ರತಿಯೊಬ್ಬರು ಮಾತಾಡಬೇಕು, ಧರ್ಮದ ಹೆಸರಿನಲ್ಲಿ ನಡೆಯುವ ಎಲ್ಲ ಹಿಂಸೆಗಳನ್ನು ಪ್ರತಿಯೊಬ್ಬರು ಪ್ರಶ್ನಿಸಬೇಕು. ಇದು ಕೇವಲ ನನ್ನೊಬ್ಬನ ಕೆಲಸವೆಂದು ಭಾವಿಸಬಾರದು. ಕಲಾವಿದ, ಪತ್ರಕರ್ತ, ಸಾಹಿತಿ, ಉಪನ್ಯಾಸಕ ಹೀಗೆ ಎಲ್ಲ ವಲಯದ ಜನರೂ ಮಾತಾಡಬೇಕು.
- ಇತ್ತೀಚಿಗೆ ಬಸ್ಸಿನಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಟೋಪಿ ಧರಿಸಿದ್ದನ್ನು ಮಹಿಳೆಯೊಬ್ಬಳು ಪ್ರಶ್ನಿಸುತ್ತಿದ್ದರೆ ಜನ ಅದನ್ನು ನೋಡಿಕೊಂಡು ಸುಮ್ಮನಿದ್ದಾರೆ. ಇದೇ ತಪ್ಪು, ಪ್ರತಿಯೊಬ್ಬರಿಗೂ ಅವರವರ ಧರ್ಮದ ಆಚರಣೆಗೆ ಅವಕಾಶವಿದೆ. ಅದನ್ನು ಗೌರವಿಸಬೇಕೆ ವಿನಹ ಅದನ್ನು ವಿರೋಧಿಸುವುದು ಸರಿಯಲ್ಲ.
ಸಂವಾದದಲ್ಲಿ ಪ್ರಗತಿಪರ ಹೋರಾಟಗಾರ ಕೆ.ಎಲ್ ಆಶೋಕ್, ವಿವೇಕ ಸಂಘಟನೆಯ ಅಧ್ಯಕ್ಷ ಕುಮಾರ್, ಶಿವು ಸೇರಿದಂತೆ ಹಲವರಿದ್ದರು.
One click many news | ನಾಳೆ ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ, ಮೆಸ್ಕಾಂ ಜನಸಂಪರ್ಕ ಸಭೆ, ಮೀನುಗಾರಿಗೆ ಸಹಾಯಧನ