ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಚಿರತೆ (Leopard) ದಾಳಿ ನಡೆಸಿದ್ದು, ಆಕೆ ಮೃತಪಟ್ಟಿದ್ದಾಳೆ.
ಯಶೋದಮ್ಮ(42) ಎಂಬಾಕೆ ಮೃತ ಮಹಿಳೆ. ಬಿಕ್ಕೋನಹಳ್ಳಿಯ ಸಹೋದರನ ಮನೆಯಲ್ಲಿದ್ದ ಇವರು ಜಮೀನಿಗೆ ಕೆಲಸಕ್ಕೆಂದು ಹೋಗಿದ್ದು, ಸುಮಾರು ಹೊತ್ತಾದರೂ ಮನೆಗೆ ಬಂದಿಲ್ಲ. ಆಗ ಮೊಬೈಲಿಗೆ ಕರೆ ಮಾಡಲಾಗಿದೆ. ಆದರೆ, ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ.
ಅನುಮಾನಗೊಂಡು ಆಕೆಯನ್ನು ಕುಟುಂಬದವರು ಹುಡುಕುವುದಕ್ಕೆಂದು ತೆರಳಿದ್ದಾರೆ. ಜಮೀನಿನಲ್ಲಿ ಆಕೆಯ ಶವ ಪತ್ತೆಯಾಗಿದೆ. ಚಿರತೆಯು ದೇಹದ ಹಲವೆಡೆ ಕಚ್ಚಿ ಗಾಯಗೊಳಿಸಿರುವುದಾಗಿ ತಿಳಿದುಬಂದಿದೆ.
READ | ಸೊರಬದಲ್ಲಿ 140 ಜನರ ವಿರುದ್ಧ ಕೇಸ್, ಸಚಿವ ಮಧು ಬಂಗಾರಪ್ಪ ನೀಡಿದ ಸೂಚನೆಗಳೇನು?
ಚಿರತೆ ಕುರುಹು ಪತ್ತೆ
ಮೃತಪಟ್ಟಿರುವ ಯಶೋದಮ್ಮ ಅವರ ದೇಹದ ಮೇಲೆಯೂ ಚಿರತೆ ದಾಳಿಯ ಕುರುಹುಗಳು ಪತ್ತೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿರುವುದಾಗಿ ತಿಳಿದುಬಂದಿದ್ದು, ಚಿರತೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡು
ಚಿರತೆ ದಾಳಿಯ ಕುರಿತು ಮಾಹಿತಿ ಲಭ್ಯವಾಗಿದ್ದೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಚಿರತೆ ಓಡಾಟದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಯಾವ ಭಾಗದಲ್ಲಿ ಚಿರತೆಯು ಓಡಾಡಿದ ಎನ್ನುವುದು ಪರಿಶೀಲಿಸಿ ಅಂತಹ ಕಡೆಗಳಲ್ಲಿ ಬೋನನ್ನು ಇಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
One click many news | ನಾಳೆ ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ, ಮೆಸ್ಕಾಂ ಜನಸಂಪರ್ಕ ಸಭೆ, ಮೀನುಗಾರಿಗೆ ಸಹಾಯಧನ