ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy sulibeke) ವಿರುದ್ಧ ಕೆಪಿಸಿಸಿ ರಾಜ್ಯ ಸಾಮಾಜಿಕ ಜಾಲತಾಣದ ಸಂಚಾಲಕಿ ಸೌಗಂಧಿಕ ರಘುನಾಥ್ (Sougandhika Raghunath) ವಿನೋಬನಗರ ಪೊಲೀಸ್ ಠಾಣೆ (Vinobnagar Police station)ಗೆ ದೂರು ನೀಡಲಾಗಿದೆ.
READ | ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಚಕ್ರವರ್ತಿ ಸೂಲಿಬೆಲೆ
ದೂರಿನಲ್ಲೇನಿದೆ?
ಸೌಗಂಧಿಕ ರಘುನಾಥ್ ಅವರ ಬಗ್ಗೆ ಅವಾಚ್ಯವಾಗಿ ಫೇಸ್ಬುಕ್’ನಲ್ಲಿ ಕಮೆಂಟ್ ಮಾಡಿದ್ದಲ್ಲದೆ, ಹಾಕಿದ ಕಾಮೆಂಟ್ ಡಿಲೀಟ್ ಮಾಡಿ, ಫೇಕ್ ಅಕೌಂಟ್ ಬಳಸಿ ಎಡಿಟ್ ಮಾಡಿಸಿ ತೇಜೋವಧೆ ಮಾಡಲು ಪ್ರಯತ್ನಿಸಿರುತ್ತಾರೆ ಎಂದು ದೂರು ನೀಡಲಾಗಿದೆ.
“ಚಂದ್ರಯಾನ 3 ಯಶಸ್ವಿಯಾಗಲು ದೇವರಿಗೆ ಕೈ ಮುಗಿದು ಫೋಟೋ ಹಾಕಿ” ಎಂದು ಚಕ್ರವರ್ತಿ ಸೂಲಿಬೆಲೆ ಮಾಡಿದ ಪೋಸ್ಟ್ ಗೆ “ವಿಜ್ಞಾನಿಗಳ ಶ್ರಮಕ್ಕೆ ಯಶಸ್ಸು ಸಿಗಲಿ” ಎಂದು ದೇವರಲ್ಲಿ ಪ್ರಾರ್ಥಿಸಿ. ಆದರೆ, ಅದನ್ನು ತೋರಿಕೆಗಾಗಿ ಆಗಲಿ ಅಥವಾ ಫೋಟೋಗಾಗಿಯಾಗಲಿ ದೇವರ ಮುಂದೆ ನಿಲ್ಲಬೇಡಿ” ಎಂದು ಸೌಗಂಧಿಕ ರಘುನಾಥ್ ಪ್ರತಿಕ್ರಿಯಿಸಿರುತ್ತಾರೆ. ಅದಕ್ಕೆ ಪ್ರತಿಯಾಗಿ ಸೂಲಿಬೆಲೆ ಚಕ್ರವರ್ತಿ ಅಸಭ್ಯವಾಗಿ ಉತ್ತರಿಸಿದ್ದಾರೆ ಎಂದು ದೂರಿದ್ದಾರೆ.
ಜಿಲ್ಲಾ ಕಾಂಗ್ರೆಸ್ಸಿನ ಮಹಿಳಾ ಮುಖಾಂಡರಾದ ಸ್ಟೇಲ್ಲಾ ಮಾರ್ಟಿನ್, ಅರ್ಚನಾ, ಸಂಧ್ಯಾರಾಣಿ, ಶಮೀಮ್ ಭಾನು, ಶೋಭಾ, ನಾಗರತ್ನ, ಗ್ಲಾಡಿ, ರಸಿಯ, ಸಲೀಮ ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಹಾಗೆಯೇ ನಕಲಿ ಖಾತೆ ಮೂಲಕ ಸಿದ್ದರಾಮಯ್ಯ ಅವರ ಬಗ್ಗೆ ಅಸಭ್ಯವಾಗಿ ಪೋಸ್ಟ್ ಮಾಡಿರುವುದಾಗಿ ಆರೋಪಿಸಿದ ಅವರು ಸಂಬಂಧಪಟ್ಟವರ ವಿರುದ್ಧವು ದೂರು ದಾಖಲಿಸಲಾಯಿತು.
Malnad agriculture | ಮಲೆನಾಡಿನ ಬೆಳೆಗಳ ಮೇಲೆ ಬರದ ಛಾಯೆ, ಅನ್ನದ ಬಟ್ಟಲಿಗೆ ಬೆಂಕಿ!