ಸುದ್ದಿ ಕಣಜ.ಕಾಂ ಹೊಸನಗರ
ವರದಿ: ಅಜಿತ್ ಗೌಡ ಬಡೇನಕೊಪ್ಪ
HOSANAGAR: ಮಲೆನಾಡಿನಲ್ಲಿ ಅಕ್ಷರಶಃ ಮಳೆ ಕೈಕೊಟ್ಟಿದ್ದು, ಮುಂಗಾರು ಮಳೆಯೂ ಸಹ ಸರಿಯಾದ ಪ್ರಮಾಣದಲ್ಲಿ ಆಗದೆ. ಜುಲೈ ತಿಂಗಳ ಮಳೆಗಾಗಿ ಕಾದು ಕುಳಿತ ರೈತರಿಗೆ, ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
READ | ಒಂದು ಕಳ್ಳತನ ಪ್ರಕರಣ ಪತ್ತೆ ಹಚ್ಚಲು ಹೋದ ಪೊಲೀಸರಿಗೆ ಸಿಕ್ಕಿದ್ದು 12 ಬೈಕ್, ಟೆಕ್ನಾಲಜಿಯಿಂದ ಪೊಲೀಸರ ವಶವಾದ ಆರೋಪಿ
ವಾಡಿಕೆಗಿಂತ ಅತಿ ಕಡಿಮೆ ಪ್ರಮಾಣದಲ್ಲಿ ಜುಲೈ ತಿಂಗಳಲ್ಲಿ ಮಳೆಯಾಗಿದ್ದು ಮಡಿ ಮಾಡಿದ ಸಸಿಗಳನ್ನ ನಾಟಿ ಕಾರ್ಯದಲ್ಲಿ ತೊಡಗಿಕೊಂಡಿರುವ ರೈತ ಸಮುದಾಯಕ್ಕೆ ಮಳೆ ಕೈಕೊಟ್ಟಿರುವುದರಿಂದ ಜಿಲ್ಲೆಯಾದ್ಯಂತ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಾರಿ ಮುಂಗಾರು ವಿಳಂಬವಾದರು ಜುಲೈ ತಿಂಗಳಲ್ಲಿ ಬಿರುಸು ಪಡೆದಿತ್ತು. ಇದನ್ನು ನಂಬಿ ಕೃಷಿ ಚಟುವಟಿಕೆ ಆರಂಭಿಸಿದ್ದ ರೈತರು (Farmers) ಈಗ ಆಗಸ್ಟ್ ತಿಂಗಳು ಮಳೆಯಿಲ್ಲದೆ ಹೈರಾಣಾಗಿದ್ದಾರೆ.
ಭತ್ತ (Paddy) ನಾಟಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಭತ್ತ ನಾಟಿ ಮಾಡಿದವರು ಕೃತಕ ಮೂಲಗಳ ಮೂಕಾಂತರ ಬೋರ್, ಬಾವಿ ಕೆರೆ ಗಳಿಂದ ತಮ್ಮ ಬೆಳೆಯ ರಕ್ಷಣೆಗೆ ತೊಡಗಿದ್ದಾರೆ.
ಸಕಾಲಕ್ಕೆ ಮಳೆ ಬಾರದೆ, ಭೀತಿಯಲ್ಲಿದ್ದ ರೈತರಿಗೆ,ಕೇವಲ ಹರಿಯುವ ನೀರನ್ನೇ(ಕಾಲುವೆ )ಆಧಾರವಾಗಿಟ್ಟುಕೊಂಡು ಭತ್ತ ಭತ್ತ ಬೆಳೆಯುವ ಸಣ್ಣಪುಟ್ಟ ರೈತರುಗಳಿಗೆ ದೊಡ್ಡ ಪ್ರಮಾಣದ ಬೆಳೆಯುವ ಶುಂಠಿ ಬೆಳೆಗಾರರಿಂದ ಅನಾನುಕೂಲಗಳಾಗುತ್ತಿವೆ ಇದು ಬೆಂಕಿಯಿಂದ ಬಾಣಲೆಗೆ ಹಾಕಿದಂತೆ ಆಗಿದೆ ಬದುಕು.
– ಗುಬ್ಬಿಗ ಗ್ರಾಮದ ರೈತರು
ಕೈಗೆ ಬಂದ ತುತ್ತು ಬಾಯಿಗೆ ಬರುವುದೆ?
ಕೈಗೆ ಬರುವ ಮೊದಲೆ ಮಲೆನಾಡ ಪ್ರಮುಖ ಆಹಾರ ಬೆಳೆ ಭತ್ತ ಬೆಳೆ ಒಣಗಿ ಹೋಗುತ್ತೆಯೇ ಎಂಬ ಭೀತಿಯಲ್ಲಿದ್ದಾರೆ. ಇದು ಒಂದು ಕಡೆ ವರುಣನ ಕೃಪೆಯಿಲ್ಲದೆ ಕಂಗೆಟ್ಟ ಸಮಸ್ಯೆಯಾದರೆ ಮತ್ತೊಂದೆಡೆ, ಮಲೆನಾಡಿನಲ್ಲಿ ಪ್ರಮುಖ ಆಹಾರ ಬೆಳೆ ಭತ್ತ ಮೆಕ್ಕೆಜೋಳ ಗದ್ದೆಗಳನ್ನ ಪ್ರಮುಖ ವಾಣಿಜ್ಯ ಬೆಳೆ ಶುಂಠಿ ಆಪೋಷಣೆ ಮಾಡಿದೆ.
ಶುಂಠಿ ಬೆಳಸ ಅತ್ಯಧಿಕ ಉತ್ಪಾದನೆ
ಶುಂಠಿ ಬೆಳೆ ಕಳೆದ 10 ವರ್ಷದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿದೆ. ಕಾರಣ ಭಾರತೀಯ ಮಾರ್ಕೆಟ್ ನಲ್ಲಿ ಶುಂಠಿ ಬೆಳೆಗೆ ಬಂಪರ್ ಬೆಲೆ ಬಂದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಬೆಳೆ ಆವರಿಸಿದೆ.
₹20 ರಿಂದ 25 ಸಾವಿರ ಅತ್ಯಧಿಕ ಗರಿಷ್ಠ ಪ್ರಮಾಣದಲ್ಲಿ ಬೆಲೆ ಪಡೆದ ಶುಂಠಿ ಬೆಳೆಯನ್ನು ಬೆಳೆಯಲು ರೈತರು ಆಸಕ್ತಿ ಹೊಂದಿದ್ದಾರೆ. ದೊಡ್ಡ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಆರಂಭಿಸಿದ್ದಾರೆ. ಶುಂಠಿಯನ್ನು ಯಥೇಚ್ಛವಾಗಿ ರಾಸಾಯನಿಕ ಪ್ರಕ್ರಿಯೆಯಲ್ಲಿಯೇ ಅದನ್ನು ಬೆಳೆಯಲಾಗುತ್ತದೆ. ಶುಂಠಿ ಬೆಳೆ ಅತಿ ಹೆಚ್ಚು ಖರ್ಚು ಸಹ ಆಗುತ್ತಿದ್ದೂ, ಎಕರೆ 1ರಿಂದ 2 ಲಕ್ಷ ಖರ್ಚು ಆಗುವ ಸಾಧ್ಯತೆ ಇದೆ. ರೋಗಗಳು ಬಾರದಂತೆ, ಹೆಚ್ಚಾಗಿ ಕ್ರಿಮಿನಾಶಕ ಹಾಗೂ ರಾಸಾಯನಿಕಗಳನ್ನು ಬಳಸಿ ಬೆಳೆಯಲಾಗುತ್ತದೆ. ಒಮ್ಮೆ ಶುಂಠಿ ಹಾಕಿದ ನಂತರ ಐದು ವರ್ಷದ ತನಕ ಆ ಭೂಮಿ ಶುಂಠಿ ಬೆಳೆಗೆ ಯೋಗ್ಯವಾಗಲ್ಲ ಎನ್ನುತ್ತಾರೆ ರೈತರು. ಅಷ್ಟು ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ.
Monkey | ಮಲೆನಾಡಿನ ಗ್ರಾಮಗಳಲ್ಲಿ ಹೆಚ್ಚಿದ ಮಂಗಗಳ ಕಾಟ, ಅಡಿಕೆ, ತೆಂಗು ರಕ್ಷಣೆಗೆ ಮನವಿ