ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನೀಡಿದ ಭರವಸೆಯಂತೆ ಆ.10ರಂದು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್)ಯ ಬಾರ್ ಮಿಲ್ ಘಟಕ ಪುನರಾರಂಭವಾಗಿಲ್ಲ. ಹೀಗಾಗಿ, ಜನರಿಗೆ ನಿರಾಸೆಯಾಗಿದೆ.
READ | ಭೂತಾನ್ ಅಡಿಕೆ ಆಮದು ವಿರುದ್ಧ ಬೆಳೆಗಾರರು ಕೆಂಡಾಮಂಡಲ, ಕಟಾವು ವೇಳೆಯೇ ಆಮದು ಗುಮ್ಮವೇಕೆ?
ಬಾರ್ ಮಿಲ್ ಘಟಕದಲ್ಲಿ ಉತ್ಪಾದನಾ ಚಟುವಟಿಕೆ ಪುನಾರಂಭವಾಗಲಿದೆ ಎಂದು ಸೇಲ್ ಆಡಳಿತ ಮಂಡಳಿ ತಿಳಿಸಿತ್ತು. ಅದರಂತೆ ಸಿದ್ಧತೆ ಮಾಡಿಕೊಳ್ಳುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈಗ ರಿಪೇರಿ ಕಾರ್ಯ ನಡೆಸಲಾಗುತ್ತಿದ್ದು, ಆ ಬಳಿಕ ಘಟಕದಲ್ಲಿ ಕೆಲಸ ಶುರುವಾಗಲಿದೆ ಎಂದು ತಿಳಿದು ಬಂದಿದೆ.
ಬಾರ್ ಮಿಲ್ನಲ್ಲಿ ಕಳೆದ ಏಳು ತಿಂಗಳಿಂದ ಉತ್ಪಾದನೆ ಸ್ಥಗಿತವಾಗಿತ್ತು. ಘಟಕ ಪುನರಾರಂಭದ ಕುರಿತು ಸೇಲ್ ಆಡಳಿತ ಮಂಡಳಿ ಸೂಚನೆ ನೀಡಿದ ಬೆನ್ನಿಗೆ ಪರಿಶೀಲನೆ ಆರಂಭಿಸಲಾಯಿತು. ಪ್ರಸ್ತುತ ತಾಂತ್ರಿಕ ದೋಷ ಕಂಡುಬಂದಿದ್ದು, ರಿಪೇರಿ ಬಳಿಕವೇ ಘಟಕದಲ್ಲಿ ಉತ್ಪಾದನೆ ಆರಂಭಿಸಲಾಗಲಿದೆ.
ಒಮ್ಮೆಯಷ್ಟೇ ಕೆಟ್ಟಿದ್ದ ಯಂತ್ರ
ಬಾರ್ ಮಿಲ್ ನಲ್ಲಿರುವ ಯಂತ್ರವು ಸುಮಾರು 60 ವರ್ಷ ಹಳೆಯದಾಗಿದ್ದು, ಮೋಟಾರು 35 ವರ್ಷಗಳ ಹಿಂದೆ ಒಂದು ಕೆಟ್ಟಿತ್ತು. ಅದಾದ ನಂತರ ಒಮ್ಮೆಯೂ ನಿಂತರಲಿಲ್ಲ. ಕಳೆದ ಆರು ತಿಂಗಳ ಹಿಂದೆ ಮೋಟಾರು ನಿಲ್ಲಿಸಲಾಗಿತ್ತು. ಅದರ ರಿಪೇರಿಯ ಹೊಣೆ ಹೊತ್ತಿದ್ದು ಬಹುಶಃ 15-20 ದಿನಗಳು ತಗುಲಲಿದೆ. ಇದೇ ತಿಂಗಳಾಂತ್ಯಕ್ಕೆ ಪುನರಾರಂಭ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
Maize Research Centre | ಶಿವಮೊಗ್ಗದಲ್ಲಿ ಮೆಕ್ಕೆಜೋಳ ಸಂಶೋಧನೆ ಕೇಂದ್ರ ಸ್ಥಾಪನೆ, ಪ್ರಯೋಜನಗಳೇನು?