ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೇಂದ್ರ ಸರ್ಕಾರ ಅಡಿಕೆ ಆಮದು ನೀತಿ (arecanut import policy)ಯನ್ನು ಈ ಕೂಡಲೆ ಹಿಂಪಡೆಯಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದರು.
READ | ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಗೆ ಚಾಕುವಿನಿಂದ ಬೆದರಿಸಿದ ವ್ಯಕ್ತಿ ಅಂದರ್, ಪರಸ್ಪರ ಆರೋಪಗಳೇನು?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರತಿವರ್ಷ 12 ಸಾವಿರ ಟನ್ ಅಡಿಕೆಯನ್ನು ಭೂತಾನ್ನಿಂದ (Bhutan arecanut import) ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ. ಇದರಿಂದ ಸಾವಿರಾರು ಅಡಿಕೆ ಬೆಳೆಗಾರರ ಬದುಕುವ ಹಕ್ಕನ್ನು ಕಸಿದಿದೆ ಎಂದು ಆರೋಪಿಸಿದರು.
ಅಡಿಕೆ ಕಟಾವು ಆರಂಭ
ಹಲವರು ಹೆಚ್ಚಿಗೆ ದರಕ್ಕೆ ಖೇಣಿಯನ್ನು ಒಪ್ಪಿಕೊಂಡು ಬೆಳೆಗಾರರಿಗೆ ಮುಂಗಡವಾಗಿ ಪಾವತಿ ಮಾಡಿದ್ದಾರೆ. ಜತೆಗೆ ಇತರ ರಾಜ್ಯಗಳಲ್ಲೂ ಅಡಿಕೆ ಕಟಾವು ಪ್ರಾರಂಭವಾಗಿದೆ. ಹೀಗಿರುವಾಗ ಭೂತಾನ್ನಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಸೂಕ್ತವಲ್ಲ ಎಂದರು.
ಅಂತ್ಯಸಂಸ್ಕಾರಕ್ಕೆ ನೆರವು ನೀಡಿ
ಬಿಪಿಎಲ್ ಕುಟುಂಬಗಳಿಗೆ ಅಂತ್ಯ ಸಂಸ್ಕಾರ ಯೋಜನೆಯಡಿ ನೀಡುತ್ತಿದ್ದ ₹5 ಸಾವಿರ ನೆರವನ್ನು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರದ್ದು ಮಾಡಿದ್ದರು. ಇದನ್ನು ಸಿದ್ದರಾಮಯ್ಯ ಸರಕಾರ ಮತ್ತೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಎಚ್.ಎಂ.ಸಂಗಯ್ಯ, ಡಾ.ಕಲ್ಪನಾ, ಎಸ್.ಟಿ.ಪುಷ್ಪವತಿ, ಮಂಜುಳಾ ಶಂಕರ್ ನಾಯ್ಕ್ ಇದ್ದರು.
AITA Code | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ದೊರಕಿತು ಐಎಟಿಎ ಕೋಡ್, ಏನಿದು, ಪ್ರಯೋಜನಗಳೇನು?