ಸುದ್ದಿ ಕಣಜ.ಕಾಂ ಸಾಗರ
SAGAR: ತಾಲೂಕಿನ ಹಲವೆಡೆ ಕಳೆದ ಏಳೆಂಟು ತಿಂಗಳುಗಳಿಂದ ಭಯಕ್ಕೆ ಕಾರಣನಾಗಿದ್ದ ಎನ್ನಲಾದ ಆರೋಪಿಯನ್ನು ಬಂಧಿಸಲಾಗಿದೆ.
ಪಶ್ಚಿಮಬಂಗಾಳದ ಹದೀದ್ ಶಾ ಎಂಬಾತನನ್ನು ಬಂಧಿಸಲಾಗಿದೆ. ಈತ ಒಂಟಿ ಮನೆಗಳನ್ನು ಗುರುತಿಸಿ ಅಂತಹ ಕಡೆಗಳಲ್ಲಿ ನುಗ್ಗಿ ದರೋಡೆಗೆ ಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ.
READ | ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ತಿಳಿಯಲೇಬೇಕಾದ 8 ಅಂಶಗಳು
ಎಲ್ಲೆಲ್ಲಿ ದರೋಡೆ ಯತ್ನ?
ಸಾಗರ ತಾಲೂಕಿನ ಆವಿನಹಳ್ಳಿ ಹೋಬಳಿಯ ಕೋಳೂರು, ಗೆಣಸಿನಕುಣಿ, ಗಿಣಿವಾರ, ಕೌತಿ, ಹುಲಿದೇವರಬನ, ಅಂಬಾರಗೋಡ್ಲು ಈ ಗ್ರಾಮಗಳಲ್ಲಿ ದರೋಡೆಗೆ ಯತ್ನಿಸಿದ್ದ ಎಂಬ ಕಾರಣಕ್ಕೆ ಈತನನ್ನು ಬಂಧಿಸಲಾಗಿದೆ. ಆರೋಪಿ ಬಳಿಯಿಂದ ಹಲ್ಲೆ ಮಾಡಲು ಬಳಸುತ್ತಿದದ್ದ ಕಬ್ಬಿಣದ ರಾಡು, ಸಿಸಿ ಕ್ಯಾಮೆರಾ ತಂತಿ ಕತ್ತರಿಸುವ ಪರಿಕರಗಳು ಇತ್ಯಾದಿಗಳನ್ನು ವಶಕ್ಕೆ ಪಡೆಯಲಾಗಿದೆ.
ಅಂಬಾರಗೋಡ್ಲು ಗ್ರಾಮ ಸುಜಾತ ಎಂಬುವವರ ಮನೆಗೆ ಸೆ.10ರಂದು ನುಗ್ಗಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.