ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ (mangalore cooker blast) ಮತ್ತು ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ (shimoga trail blast ) ಪ್ರಕರಣದ ಶಂಕಿತರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಎನ್ನಲಾದ ತೀರ್ಥಹಳ್ಳಿಯ ಇಂದಿರಾನಗರ ನಿವಾಸಿ ಅರಾಫತ್ ಅಲಿ(Arafat Ali) ಯನ್ನು ಬಂಧಿಸಲಾಗಿದೆ.
READ | ಎಚ್.ಎಸ್.ಆರ್.ಪಿಗೆ ಅರ್ಜಿ ಸಲ್ಲಿಕೆ ಹೇಗೆ, ಏನಿದು ಅತಿ ಸುರಕ್ಷಿತ ನೋಂದಣಿ ಫಲಕ? ಇಲ್ಲಿದೆ ವಿವರ
ಅರಾಫತ್ ಅಲಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ-National Investigation Agency) ಅಧಿಕಾರಿಗಳು ದೆಹಲಿಯ ವಿಮಾಣದಲ್ಲಿ ಗುರುವಾರ ಬಂಧಿಸಿದ್ದಾರೆ. ಕೀನ್ಯಾದ ನೈರೋಬಿಯಿಂದ ಗಡಿಪಾರಾಗಿ ನವದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅಲಿಯನ್ನು ಬಂಧಿಸಲಾಗಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ (ಐಸಿಸ್)ಗೆ ವಿದೇಶದಿಂದ ಫಂಡಿಂಗ್ ಮಾಡುತ್ತಿದ್ದ ಕಿಂಗ್ ಪಿನ್’ನನ್ನು ಬಂಧಿಸಿರುವುದಾಗಿ ಎನ್.ಐಎ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ತೀರ್ಥಹಳ್ಳಿಯಿಂದ ಎಸ್ಕೇಪ್
ಮೂಲತಃ ತೀರ್ಥಹಳ್ಳಿಯವನಾದ ಅರಾಫತ್ ಅಲಿ ನಾಲ್ಕು ವರ್ಷಗಳ ಹಿಂದೆ ತೀರ್ಥಹಳ್ಳಿಯಿಂದ ತಲೆಮರೆಸಿಕೊಂಡಿದ್ದ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಮತ್ತು ಇಂಜಿನಿಯರಿಂಗ್ ಪದವೀಧರ ಮಾಜ್ ಮುನೀರ್ ಮತ್ತು ಮತೀನ್ ಇವರು ಅಲಿ ಜೊತೆ ಗುರುತಿಸಿಕೊಂಡಿದ್ದರು.
ಕದ್ರಿ ಗೋಡೆ ಬರಹ ಪ್ರಕರಣದ ಪ್ರಮುಖ ಆರೋಪಿಗಳಾದ ಶಾರೀಕ್ (Sharik) ಮತ್ತು ಮಾಜ್ ಮುನೀರ್ (Maz muneer) ಎಂಬುವವರಿಗೆ ಅರಾಫತ್ ಅಲಿ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ನೆರವು ನೀಡಿದ್ದ ಎಂದು ಆರೋಪಿಸಲಾಗಿದೆ. ನವದೆಹಲಿಯಲ್ಲಿ ಅರಾಫತ್ ಅಲಿ ಬಂಧನಕ್ಕೆ ಒಳಗಾದ ಬೆನ್ನಲ್ಲೇ ತೀರ್ಥಹಳ್ಳಿ ಮತ್ತು ಶಿವಮೊಗ್ಗಕ್ಕೆ ಎನ್.ಐ.ಎ ತಂಡವೂ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದೆ ಎಂದು ತಿಳಿದುಬಂದಿದೆ.