ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಮಿಳುನಾಡಿನ ಕೊಯಮುತ್ತೂರಿನಲ್ಲಿ ನ.7 ರಿಂದ 10ರ ವರೆಗೆ ನಡೆಯಲಿರುವ 38ನೇ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಕ್ರೀಡಾಶಾಲೆಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
VIDEO REPORT | ಅವಿರತ ಶ್ರಮದ ಮೂಲಕ ಏಷ್ಯನ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಜಯಿಸಿ ದೇಶ ಮತ್ತು ನಾಡಿಗೆ ಕೀರ್ತಿ ತಂದ ಶಿವಮೊಗ್ಗದ ಪ್ರತಿಭೆ ಕಿಶನ್ ಗಂಗೊಳ್ಳಿ
READ | ನಿಮ್ಮ ಬಳಿ ಒಳ್ಳೆಯ ಕಥೆ ಇದೆಯೇ?, ಕಿರುಚಿತ್ರಕ್ಕೆ ಇದೊಂದು ಉತ್ತಮ ಅವಕಾಶ
ಯಾರೆಲ್ಲ ಆಯ್ಕೆ?
ಸಿರಿ ಕೆ.ಜೆ.(ಟ್ರೈಯಾಥ್ಲಾನ್), ಅಮೂಲ್ಯ ಎಂ.ವಿ.(3ಕೆ.ವಾಕ್), ಶರತ್ ಕೆ.ಜೆ (ಕಿಡ್ಸ್ ಜಾವಲಿನ್), ಭೂಮಿಕಾ ಕೆ.ಎನ್. (ಟ್ರಿಪಲ್ ಜಂಪ್) ಹಾಗೂ ಸುದೀಪ್ (ಹೈಜಂಪ್) ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.
ಈ ಎಲ್ಲ ಕ್ರೀಡಾಪಟುಗಳು ತರಬೇತುದಾರರಾದ ಬಾಳಪ್ಪ ಮಾನೆ ಎಂಬುವವರ ಬಳಿ ದೈನಂದಿನ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.