ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಡಿಕೆ ಹೈ ವ್ಯಾಲ್ಯೂ ಕಮಾಡಿಟಿ ಎಂದು 60 ಪೈಸೆ ಸೆಸ್ ವಿಧಿಸಲಾಗುತ್ತಿದೆ. ಒಂದು ಲೋಡ್ ಗೆ 75 ರಿಂದ 1 ಲಕ್ಷ ರೂ.ವರೆಗೆ ಸೆಸ್ ಆಗುತ್ತಿದೆ. ಇದು ತುಂಬ ಹೊರೆಯಾಗಿದ್ದು, ಎಲ್ಲರಿಗೂ ಸಮಾನವಾದ ಕನಿಷ್ಠ ದರವನ್ನು ನಿಗದಿಪಡಿಸಬೇಕು ಎಂದು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಶಂಕರಪ್ಪ ಆಗ್ರಹಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ)(ತಿದ್ದುಪಡಿ) ವಿಧೇಯಕ 2023 ನ್ನು ಪರಿಶೀಲಿಸಿ ಸದನಕ್ಕೆ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ಪರಿಶೀಲನಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.
READ | ಮೈಸೂರು ಹುಡುಗಿಯ ಮೋಹದ ಬಲೆಗೆ ಬಿದ್ದ ಭದ್ರಾವತಿ ಯುವಕ, ಮುಂದೇನಾಯ್ತು?
ಬೇಡಿಕೆಗಳೇನು?
- ಹೊಸಬರಿಗೆ ಶೀಘ್ರವಾಗಿ ಪರವಾನಗಿ ನೀಡಬೇಕು. ಪರವಾನಗಿ ಸುಲಭವಾಗಿ ಲಭಿಸಬೇಕು. ಯಾರ್ಡ್ ನಲ್ಲಿ ಸಾಕಷ್ಟು ಮಳಿಗೆಗಳಿದ್ದು ಹೆಚ್ಚಿನವರಿಗೆ ಅವಕಾಶ ನೀಡಬೇಕು. ಮಿತಿಯನ್ನು ಸಡಿಲಗೊಳಿಸಬೇಕು. ಹಾಗೂ ಮುಖ್ಯವಾಗಿ ಎಪಿಎಂಸಿ ಮಳಿಗೆಗಳನ್ನು ಆಧಾರ ಮಾಡಿ ಸಾಲ ಪಡೆಯಲು ಅವಕಾಶ ಮಾಡಿಕೊಡಬೇಕು.
- ಎಪಿಎಂಸಿ ಯಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆಯಿಂದ ಯಾವುದೇ ರೀತಿಯ ಸೇವೆ ಪಡೆಯುತ್ತಿಲ್ಲ. ಬದಲಾಗಿ ಎಪಿಎಂಸಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಆದರೂ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಸುತ್ತಿದ್ದು ಹೊರೆಯಾಗುತ್ತಿದೆ. ಆದ್ದರಿಂದ ಪ್ರತ್ಯೇಕ ವರ್ಗದ ತೆರಿಗೆಯನ್ನು ವಿಧಿಸಲು ಕ್ರಮ ವಹಿಸಬೇಕು.
ಪ್ರತ್ಯೇಕ ತೆರಿಗೆ ವ್ಯವಸ್ಥೆ ಮಾಡಿ
ಸಮಿತಿ ಸದಸ್ಯರಾದ ಡಿ. ಎಸ್.ಅರುಣ್ ಮಾತನಾಡಿ, ಪ್ರಸ್ತುತ ಕಮರ್ಷಿಯಲ್ ಮತ್ತು ರೆಸಿಡೆನ್ಸಿಯಲ್ ತೆರಿಗೆ ಮಾತ್ರ ಸಂಗ್ರಹಿಸಲಾಗುತ್ತಿದೆ. ಮಳಿಗೆಗಳು ಕಮರ್ಷಿಯಲ್ ತೆರಿಗೆ ಅಡಿ ಬರುತ್ತಿರುವುದರಿಂದ ಹೊರೆಯಾಗುತ್ತಿದೆ. ಕೈಗಾರಿಕೆ ಹಾಗೂ ಎಪಿಎಂಸಿಗೆ ಮೂರನೇ ವರ್ಗದ ಪ್ರತ್ಯೇಕ ತೆರಿಗೆ ವ್ಯವಸ್ಥೆ ಮಾಡುವಂತೆ ಕೋರಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಅನಿಲ್ ಕುಮಾರ್, ಹೇಮಲತಾ ನಾಯಕ್, ತಿಪ್ಪೇಸ್ವಾಮಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಪ್ರಸಾದ್ ಇತರೆ ಅಧಿಕಾರಿಗಳು ಹಾಜರಿದ್ದರು.