ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯವರ ವಿರುದ್ಧ ಸೇವಾ ನ್ಯೂನ್ಯತೆ ಕುರಿತು ಆಪಾದಿಸಿ ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಆದೇಶಿಸಿದೆ.
READ | ಶಿವಮೊಗ್ಗದಲ್ಲಿ ಹೊಸ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ನಗರದ ವಿನೋಬನಗರ ವಾಸಿ ಜಿ.ಆರ್.ವೇದಾವತಿ ಎಂಬುವವರ ಪತಿ ದ್ವಿಚಕ್ರ ವಾಹನ ಅಪಘಾತದಲ್ಲಿ ಮರಣ ಹೊಂದಿದ್ದು, ಈ ವಾಹನಕ್ಕೆ ₹15 ಲಕ್ಷಗಳ ಪರಿಹಾರದ ವಿಮಾ ಯೋಜನೆಯ ಪಾಲಿಸಿ ಪಡೆದಿರುತ್ತಾರೆ. ಆದರೆ ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯವರು ನಾನಾ ಕಾರಣಗಳನ್ನು ನೀಡಿ ವಿಮಾ ಪರಿಹಾರ ಪಾವತಿಸಲು ನಿರಾಕರಿಸಿ ಸೇವಾನ್ಯೂನ್ಯತೆ ತೋರಿದ್ದು, ಈ ಪ್ರಕರಣವು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸೂಕ್ತ ಪರಿಹಾರ ಕೋರಿ ದಾಖಲು ಮಾಡಿರುತ್ತಾರೆ.
ಆದೇಶದಲ್ಲಿ ಏನಿದೆ?
ಆಯೋಗವು ಎಲ್ಲ ಅಂಶಗಳನ್ನು ಪರಿಶೀಲಿಸಿ ಕಂಪನಿಯೂ ನೀಡಿರುವ ಕಾರಣವು ಸೂಕ್ತವಲ್ಲ ಮತ್ತು ಸೇವಾನ್ಯೂನತೆ ಎಂದು ಪರಿಗಣಿಸಿ ವಿಮಾ ಕಂಪನಿಯುವ ವೇದಾವತಿ ಎಂಬುವವರಿಗೆ ₹15 ಲಕ್ಷಗಳ ವಿಮಾ ಪರಿಹಾರ ಮೊತ್ತವನ್ನು ವಾರ್ಷಿಕ ಶೇ.9 ಬಡ್ಡಿಯೊಂದಿಗೆ ಪಾವತಿಸಬೇಕು. ಫಿರ್ಯಾದುದಾರರಿಗೆ ಉಂಟಾದ ಮಾನಸಿಕ ಹಾನಿಗೆ ₹40 ಸಾವಿರಗಳ ಪರಿಹಾರವನ್ನು ಪಾವತಿಸಬೇಕು ಹಾಗೂ ನ್ಯಾಯಾಲಯದ ಖರ್ಚು ವೆಚ್ಚಗಳನ್ನು ಆದೇಶವಾದ 45 ದಿನಗಳೊಳಗಾಗಿ ಪಾವತಿಸಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಮಹಿಳಾ ಸದಸ್ಯೆ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ. ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶ ನೀಡಿದೆ.