ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ನವ ವಿವಾಹಿತೆಯೊಬ್ಬಳ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ಶಮಿತಾ (24) ಮೃತಪಟ್ಟಿದ್ದಾರೆ.
ನೊಣಬೂರು ಗ್ರಾಪಂ ವ್ಯಾಪ್ತಿ ಬಿಜ್ಜಳ ಗ್ರಾಮದ ಶಮಿತಾ 2023ರಲ್ಲಿ ಯುವಕನಿಗೆ ಮದುವೆಯಾಗಿದ್ದರು. ಸೋಮೇಶ್ವರ್ ವನ್ಯಜೀವಿ ವಿಭಾಗದ ಅಮಾವಾಸ್ಯೆಬೈಲು ವಲಯಾರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತಿ ವಿರ್ದ್ಯಾಥ್ ರಾತ್ರಿ ಪಾಳಿಗೆ ತೆರಳಿದಾಗ ಘಟನೆ ನಡೆದಿದೆ.
ಬೆಳಗ್ಗೆ ನೋಡಿದಾಗ ಶಾಕ್
ಶಮಿತಾ ರಾತ್ರಿ ಮಲಗಲು ಉಪ್ಪರಿಗೆ ಕೊಠಡಿಗೆ ತೆರಳಿದ್ದ ಶಮಿತಾ ಬೆಳಗ್ಗೆ ಎದ್ದಿರಲಿಲ್ಲ. ಕೊಠಡಿ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಮಾವ, ಅತ್ತೆ ಕೊಠಡಿ ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶಮಿತಾಳ ಮೃತದೇಹ ಕಾಣಿಸಿದೆ. ತಕ್ಷಣ ಶಮಿತಾಳ ತಂದೆ, ತಾಯಿಗೆ ಪೋನ್ನಲ್ಲಿ ವಿಷಯ ತಿಳಿಸಲಾಗಿದೆ. ಅವರು ಆಗಮಿಸಿದ ನಂತರ ಕೊಠಡಿ ಬಾಗಿಲು ಒಡೆದು ಮೃತದೇಹ ಬಳಿ ಡೆತ್ ನೋಟ್ ದೊರಕಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದರು ಎನ್ನಲಾಗಿದೆ. ಶಮಿತಾ ಸಾವಿನಿಂದ ಆಕ್ರಂದನ ಮುಗಿಲು ಮುಟ್ಟಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಸಿದ್ಧವಾಗಲಿದೆ ಟ್ರಕ್ ಟರ್ಮಿನಲ್, ಏನೇನು ಸೌಲಭ್ಯ ಲಭ್ಯ? ಪ್ರಯೋಜನವೇನು?