ಸುದ್ದಿ ಕಣಜ.ಕಾಂ ಸೊರಬ
SORABA: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನ (chandragutti temple)ಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬಹಿರಂಗ ಸವಾಲು ಹಾಕಿದರು.
ಶುಕ್ರವಾರ ಸೊರಬದ ಚಂದ್ರಗುತ್ತಿ ದೇವಸ್ಥಾನಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಈಶ್ವರಪ್ಪರನ್ನು ಬೆಂಬಲಿಸದಂತೆ ರಾಘವೇಂದ್ರ ಅವರು ಮಠಾಧೀಶರಿಗೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಅವರು ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಹೇಳಿದರು.
READ | ಹತ್ತು ತಿಂಗಳುಗಳ ಬಳಿಕ ಬಿಜೆಪಿ ವೇದಿಕೆಯಲ್ಲಿ ಕುಮಾರ್ ಬಂಗಾರಪ್ಪ ಪ್ರತ್ಯಕ್ಷ
ಈಶ್ವರಪ್ಪ ಅವರು ಪುತ್ರನಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪರ ಕುಟುಂಬಕ್ಕೆ ವಿರೋಧಿಸುತ್ತಿರುವುದರಲ್ಲಿ ಅರ್ಥವೇ ಇಲ್ಲ. ಪ್ರತಿಕ್ಷೇತ್ರದಲ್ಲಿ ಅಭಿಪ್ರಾಯ ಸಂಗ್ರಹಿಸಿಯೇ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ ಎಂದರು.
ದೇಶಭಕ್ತಿ ಹೆಸರಿನಲ್ಲಿ ಬಿಜೆಪಿ ಸಂಘಟನೆ ಒಡೆಯುವ ಪ್ರಯತ್ನ
ಯಡಿಯೂರಪ್ಪ ಅವರು ಹಿಂದುತ್ವವನ್ನು ರಾಜಕೀಯ ಪ್ರಚಾರಕ್ಕಾಗಿ ಎಂದೂ ಬಳಸಿಲ್ಲ. ಈಶ್ವರಪ್ಪ ಅವರು ದೇಶಭಕ್ತಿಯ ಹೆಸರಿನಲ್ಲಿ ಬಿಜೆಪಿ ಸಂಘಟನೆಯ ಒಡೆಯುವ ಪ್ರಯತ್ನ ನಡೆಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದರೆ ಹಿಂದುತ್ವದ ಮತಗಳು ತಮಗೆ ಬರುತ್ತವೆಂಬ ಭ್ರಮೆಯಲ್ಲಿದ್ದಾರೆ. ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಮಡಿವಾಳ ಮಾಚಿದೇವ ನಿಗದಮ ಮಾಜಿ ಅಧ್ಯಕ್ಷ ರಾಜು ತಲ್ಲೂರು, ಪ್ರಕಾಶ್ ತಲಕಾಲಕೊಪ್ಪ, ಜ್ಞಾನೇಶ್, ಶಿವಕುಮಾರ್ ಕಡಸೂರು, ಕೆ.ಅಜ್ಜಪ್ಪ ಇತರರು ಉಪಸ್ಥಿತರಿದ್ದರು.