ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರು ಮತ್ತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರ ವಿರುದ್ಧ ಪ್ರಖರ ಟೀಕೆ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿಯ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ.
READ | ಆಯನೂರು ಮಂಜುನಾಥ್ಗೆ ಒಲಿದ ಟಿಕೆಟ್, ಇವರ ಬಗ್ಗೆ ತಿಳಿಯಲೇಬೇಕಾದ ಮೂರು ಅಂಶಗಳಿವು
ಆಯನೂರು ಆರೋಪಗಳೇನು?
* ಸಾರ್ವಜನಿಕ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಅವರು ಹೀನಾಯವಾಗಿ ಟೀಕಿಸಿದ್ದರು. ಅವರ ಹೇಳಿಕೆಯಿಂದ ಯಡಿಯೂರಪ್ಪ ಅವರು ಜನರ ಬಳಿ ಹೋಗಿ ಮತಯಾಚನೆ ಮಾಡಲಾಗುತ್ತಿಲ್ಲ. ಮುಜುಗರಕ್ಕೆ ಒಳಗಾಗಿದ್ದಾರೆ. ಈಶ್ವರಪ್ಪ ಟೀಕೆ ಮಾಡಿದ್ದನ್ನು ಯಡಿಯೂರಪ್ಪರ ಪುತ್ರರು ಹಾಗೂ ಪಕ್ಷದಲ್ಲಿ ಯಾರೂ ವಿರೋಧಿಸಿಲ್ಲ.
* ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕಣ್ಣೀರು ಹಾಕತ್ತ ಕೆಳಗಿಳಿಸಲಾಗಿತ್ತು. ಅದನ್ನು ಅವರ ಪುತ್ರರು ಪ್ರಶ್ನಿಸದೇ ಇರುವುದು ದುರ್ದೈವ. ತಂದೆಯ ಪರ ಧ್ವನಿಯೂ ಎತ್ತಲಿಲ್ಲ.
ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎಸ್.ಕೆ.ಮರಿಯಪ್ಪ, ಕಲಗೋಡು ರತ್ನಾಕರ್, ವೈ.ಎಚ್.ನಾಗರಾಜ್, ಕಲೀಮ್ ಪಾಶಾ, ಶಿ.ಜು.ಪಾಶಾ ಉಪಸ್ಥಿತರಿದ್ದರು.