ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆ.ಎಸ್.ಈಶ್ವರಪ್ಪ ಅವರು ತಮ್ಮ ಅಪ್ಪಟ ಶಿಷ್ಯಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಶಾಸಕ ಚನದನಬಸಪ್ಪ (ಚನ್ನಿ) ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
READ | ಈಶ್ವರಪ್ಪಗೆ ರಾಘವೇಂದ್ರ ಬಹಿರಂಗ ಸವಾಲು, ಚಂದ್ರಗುತ್ತಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ ನೋಡೋಣ
ನಗರದ ತಮ್ಮ ಚುನಾವಣೆ ಕಚೇರಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರ “ತಾಕತ್ತಿಲ್ಲದವರು ಮೋದಿ ಫೋಟೊ ಹಾಕಿಕೊಳ್ಳುತ್ತಾರೆ. ಮೋದಿಗೆ ಮತ ಹಾಕಬೇಕಾದರೆ ಬಿಜೆಪಿಗೆ ಹಾಕಬೇಕೆ ವಿನಃ ಮತ್ತ್ಯಾರಿಗೋ ಅಲ್ಲ” ಎಂದು ಕಿಡಿಕಾರಿದ್ದರು. ಅದಕ್ಕೆ ಪ್ರತಿಕ್ರಿಯಿಸುವಾಗ ಈಶ್ವರಪ್ಪ ಈ ರೀತಿ ಹೇಳಿದರು.
ಪಾಲಿಕೆಯ ಎಲ್ಲ ಸದಸ್ಯರ ಬೆಂಬಲ ನಿಮಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಕಷ್ಟು ಕಾರ್ಯಕರ್ತರ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಟಿಕೆಟ್ ಆಯ್ಕೆಯಲ್ಲಿ ನಾನೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ತಿಳಿಸಿದರು.
ಪ್ರಮುಖರಾದ ಇ.ವಿಶ್ವಾಸ್, ಗನ್ನಿ ಶಂಕರ್, ಮೋಹನ್, ಶ್ರೀಕಾಂತ್, ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.