ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಂಡಾಯ ಅಭ್ಯರ್ಥಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಮೋದಿ ಕಾರ್ಯಕ್ರಮಕ್ಕೆ ಬರದೇ ಇರುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
READ | ಈಶ್ವರಪ್ಪಗೆ ರಾಘವೇಂದ್ರ ಬಹಿರಂಗ ಸವಾಲು, ಚಂದ್ರಗುತ್ತಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ ನೋಡೋಣ
ನಗರದ ತಮ್ಮ ಚುನಾವಣೆ ಕಚೇರಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಪ್ರಚಾರಕ್ಕೆ ಬಂದಿದ್ದರು. ಒಂದುವೇಳೆ, ಆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದರೆ ಮೋದಿಗೆ ಮುಜುಗರ ಆಗುವ ಸಾಧ್ಯತೆ ಇತ್ತು. ಈ ಕಾರಣಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ” ಎಂದು ಹೇಳಿದರು.
ಹಿಂದೂ ಹುಲಿ ಕಳೆದುಕೊಳ್ಳಲು ಯಾರಿಗೂ ಇಷ್ಟವಿಲ್ಲ
ಜಿಲ್ಲೆಯಲ್ಲಿ ಯಾರೂ ಹಿಂದುತ್ವದ ಬಗ್ಗೆ ಮಾತೇ ಆಡುತ್ತಿಲ್ಲ. ಹೀಗಾಗಿ, ಹಿಂದೂ ಹುಲಿಯಾದ ನನ್ನನ್ನು ಕಳೆದುಕೊಳ್ಳಲು ಯಾರಿಗೂ ಇಷ್ಟವಿಲ್ಲ. ಹೀಗಾಗಿ, ಲಿಂಗಾಯತರು, ಈಡಿಗರು, ಒಕ್ಕಲಿಗರು ಮತ್ತು ಮುಸ್ಲಿಮರು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಏಪ್ರಿಲ್ 5ರಂದು ತೀರ್ಥಹಳ್ಳಿಯ ಅಂಬುತೀರ್ಥ ಮತ್ತು ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸಭೆ ನಡೆಸಲಿದ್ದಾನೆ. ನಿರೀಕ್ಷೆ ಮೀರಿ ಜನ ಬೆಂಬಲಿಸುತ್ತಿದ್ದಾರೆ ಎಂದರು.
ನೀವು ಬಂದರೆ ನಾನೂ ಬರುವೆ
ರಾಘವೇಂದ್ರ ಅವರು ಈಶ್ವರಪ್ಪ ಅವರಿಗೆ ಚಂದ್ರಗುತ್ತಿ ದೇವಸ್ಥಾನಕ್ಕೆ ಬಂದು ಗಂಟೆ ಹೊಡೆಯುವಂತೆ ಹೇಳಿದ್ದಾರೆ. ಒಂದುವೇಳೆ ಅವರ ತಂದೆ ಯಡಿಯೂರಪ್ಪ ಅವರೂ ಬಂದು ದೇವಸ್ಥಾನದಲ್ಲಿ ಮಠಾಧೀಶರು ಮತ್ತು ಮಹಿಳೆಯರಿಗೆ ನೋವುಂಟು ಮಾಡಿಲ್ಲವೆಂದರೆ ಗಂಡೆ ಹೊಡೆಯಲಿ. ನಾನೂ ಹೊಡೆಯುವೆ. ಇಲ್ಲಷ್ಟೇ ಅಲ್ಲ; ಅಯೋಧ್ಯೆಯಲ್ಲೂ ಗಂಟೆ ಹೊಡೆಯುವುದಾಗಿ ಹೇಳಿದರು.
12ರಂದು ನಾಮಪತ್ರ ಸಲ್ಲಿಕೆ
ಈಶ್ವರಪ್ಪ ನಾಮಪತ್ರ ಸಲ್ಲಿಕೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಏಪ್ರಿಲ್ 12ರಂದು 25 ಸಾವಿರ ಜನರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸುವೆ. ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಹೊರಡಲಿದೆ ಎಂದು ತಿಳಿಸಿದರು.
ಇ.ವಿಶ್ವಾಸ್, ಗನ್ನಿ ಶಂಕರ್, ಮೋಹನ್, ಶ್ರೀಕಾಂತ್, ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.