MLC ticket | ಶಿವಮೊಗ್ಗ ಎಂಎಲ್.ಸಿ ಟಿಕೆಟ್ ಬಗ್ಗೆ ಮಹತ್ವದ ಹೇಳಿಕೆ‌ ನೀಡಿದ ಡಿಕೆ ಶಿವಕುಮಾರ್

DK Shivakumar

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನೈಋತ್ಯ ಪದವೀಧರ ಕ್ಷೇತ್ರಕ್ಕೆ ಆಯನೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK shivakumar) ತಿಳಿಸಿದರು.

READ | 11 ಕೆಜಿ ಬಂಗಾರ, 30 ಕೆಜಿ ಬೆಳ್ಳಿ, ಐಷಾರಾಮಿ‌ ಕಾರು, ಗೀತಾ- ಶಿವರಾಜಕುಮಾರ್ ಬಳಿ ಇರುವ ಆಸ್ತಿ ಎಷ್ಟು? ಕಾರೆಷ್ಟಿವೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಪದವೀಧರ ಕ್ಷೇತ್ರದಿಂದ‌ ಆಯನೂರು ಮಂಜುನಾಥ್ (Ayanur Manjunath) ಅವರನ್ನು ಅಭ್ಯರ್ಥಿಯಾಗಿ ಎಐಸಿಸಿ (All India Congress Committee) ಆಯ್ಕೆ ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಭ್ಯರ್ಥಿ ಬದಲಾವಣೆ‌ ಮಾಡುವುದಿಲ್ಲ. ನಮ್ಮ ಅಭ್ಯರ್ಥಿ ಅವರೇ ಆಗರಲಿದ್ದಾರೆ” ಎಂದು ಹೇಳಿದರು.
“ಪದವೀಧರ ಕ್ಷೇತ್ರಕ್ಕೆ ಬೇರೆಯವರೂ ಟಿಕೆಟ್ ಕೇಳಿದ್ದರು. ಅವರಿಗೆ ಕೇಳುವ ಹಕ್ಕಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಅಭ್ಯರ್ಥಿಯನ್ನು ಬದಲಾವಣೆ ಮಾಡುವ ಹಕ್ಕು ನನಗಿಲ್ಲ. ಈಗಾಗಲೇ ಎಐಸಿಸಿ ಈ ಬಗ್ಗೆ ತೀರ್ಮಾನಿಸಿ, ಘೋಷಣೆಯನ್ನೂ ಮಾಡಿದೆ” ಎಂದರು.
ಶಿವಮೊಗ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್, ನಟ ಶಿವರಾಜಕುಮಾರ್ ಉಪಸ್ಥಿತರಿದ್ದರು.

AYANUR MANJUNATH PHOTO

error: Content is protected !!