ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ ಎ.ಎಸ್.ಐ ಒಬ್ಬನು ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಆರ್.ಎಂ.ಎಲ್ ನಗರದ ನಿವಾಸಿ ಪೊಲೀಸ್ ಅಧಿಕಾರಿ ರೆಹಮಾನ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಆತನನ್ನು ಬಂಧಿಸಿ, ಲಂಚದ ಹಣ ₹1 ಲಕ್ಷ ವಶಕ್ಕೆ ಪಡೆಯಲಾಗಿದೆ.
READ | ಶರಾವತಿ ಸಿಂಗಳಿಕ ಅಭಯಾರಣ್ಯದಲ್ಲಿ ಜಿಂಕೆ ಬೇಟೆ, ಆರೋಪಿಗಳು ಅರೆಸ್ಟ್
ಮಾಸಿಕ ₹1.25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ
ಕನ್ಸ್ಲೈಂಟ್ ವ್ಯವಹಾರ ಮಾಡುವ ಮಹಮದ್ ರಫೀಕ್ ಶಿವಮೊಗ್ಗ ಠಾಣೆಯಲ್ಲಿ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ್ ಮುಂದೆ ಹಾಜರಾಗಿ ಗಣಕೀಕೃತ ದೂರು ನೀಡಿದ್ದರು. ದೂರಿನಲ್ಲಿ ನಗರ ಎನ್.ಟಿ. ರಸ್ತೆ ಸುಂದರಾಶ್ರಯ ಎದುರು ಕನ್ಸ್ಲ್ಡಿಂಗ್ ಶಾಪ್ ಇಟ್ಟುಕೊಂಡು ರಿಯಲ್ ಎಸ್ಟೇಟ್, ಹಳೆಯ ಕಾರ್ ಡೀಲರ್, ಮನೆಯನ್ನು ಲೀಜ್ಗೆ ಬಾಡಿಗೆ ಕೊಡಿಸುವ ಕೆಲಸ ಮಾಡಿಕೊಂಡಿದ್ದಾನೆ. ಈತನಿಗೆ ರೆಹಮಾನ್ ಪರಿಚಯ ಇರುತ್ತದೆ. ಈ ಹಿಂದೆ ಶಿವಮೊಗ್ಗ ಪೊಲೀಸ್ ಠಾಣೆಗಳಲ್ಲಿ ಓಸಿ (ಮಟ್ಕಾ) ಜೂಜಾಟ ನಡೆಸುತ್ತಿರುತ್ತಾರೆಂದು ಕೇಸು ದಾಖಲಾಗಿ ಕೆಲವು ಕೇಸುಗಳು ಕೋರ್ಟ್ ವಿಚಾರಣೆಯಲ್ಲಿರುತ್ತವೆ.
ಹಣಕ್ಕೆ ಬೇಡಿಕೆ ಇಡಲು ಕರೆದಿದ್ದ
ನಗರದ ಕೆಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪ ಬಂದಾಗ ರೆಹಮಾನ್, “ಶಿವಮೊಗ್ಗ ಸಿಟಿಯಲ್ಲಿ ಮಟ್ಕಾ ಬರೆಯುವವರ ಹತ್ತಿರ ಹೋಗಿ ಅವರ ಹತ್ತಿರ ದುಡ್ಡನ್ನು ಸಂಗ್ರಹಿಸಿ ತಂದುಕೊಡುವಂತೆ ಹೇಳಿದ್ದು, ಇದರಿಂದ ತನಗೆ ತೊಂದರೆ ಆಗುತ್ತದೆ ಎಂದು ಹೇಳಿದಾಗ ರೆಹಮಾನ್ ಅವರು ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಪ್ರತಿ ತಿಂಗಳು ₹30,000 ದಂತೆ ಒಟ್ಟು ₹1.20 ಲಕ್ಷ ತಂದುಕೊಡುವಂತೆ ಕೇಳಿದ್ದಾರೆ. ಆಗ ರಫೀಕ್ ಅಷ್ಟೊಂದು ಆಗೋದಿಲ್ಲ ನನಗೆ ತುಂಬ ಕಷ್ಟ ಆಗುತ್ತದೆ. ಪ್ರತಿ ತಿಂಗಳು ₹25,000 ದಂತೆ ₹1 ಲಕ್ಷ ಕೊಡುತ್ತೇನೆ” ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಆರ್.ಎಂ.ಎಲ್ ನಗರದಲ್ಲಿ ಹಣ ಸ್ವೀಕರಿಸಯವಾಗ ರೆಡ್ ಹ್ಯಾಂಡ್ ಆಗಿ ಲಂಚದ ಹಣ ₹1 ಲಕ್ಷ ಸಹಿತ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಪ್ರಕರಣ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ ನಾಯ್ಕ ಕೈಗೊಂಡಿದ್ದಾರೆ.
ಉಮೇಶ್ ಈಶ್ವರ್ ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಲೋಕಾಯುಕ್ತ ಚಿತ್ರದುರ್ಗ ಕಚೇರಿಯ ಪೊಲೀಸ್ ನಿರೀಕ್ಷಕಿ ವೈ.ಎಸ್.ಶಿಲ್ಪಾ, ಸಿಬ್ಬಂದಿ ಜಿ.ಎನ್. ಸಂತೋಷ್, ಎಂ.ವೀರೇಶ್, ಕೆ.ಟಿ. ಮಾರುತಿ, ಜಿ.ಮಹಾಲಿಂಗಪ್ಪ, ಆರ್. ವೆಂಕಟೇಶ್ ಕುಮಾರ್ ಪಾಲ್ಗೊಂಡಿದ್ದರು.