ಸುದ್ದಿ ಕಣಜ.ಕಾಂ ಸಾಗರ
SAGAR: ಅಡಿಕೆ, ಕಾಳುಮೆಣಸು, ಗೇರು ಬೀಜ ಹಾಗೂ ಓಮ್ನಿ ವ್ಯಾನ್ ಕಳವು ಪ್ರಕರಣವನ್ನು ಸಾಗರ ಪೇಟೆ ಪೊಲೀಸರು ಬೇಧಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಸಾಗರ ಪೇಟೆಯ ಎಸ್.ಎನ್.ನಗರ ನಿವಾಸಿ ಮಹಮದ್ ಜಾಕೀರ್ ಅಲಿಯಾಸ್ ಜಾಕೀರ್ (32) ಬಂಧಿತ ಆರೋಪಿ. ಅಂದಾಜು ₹81,145 ಮೌಲ್ಯದ ಅಡಿಕೆ , ಕಾಳುಮೆಣಸು, ಗೇರು ಬೀಜಗಳನ್ನು ಮತ್ತು ಕಳ್ಳತನ ಮಾಡಿ ಕೃತ್ಯಕ್ಕೆ ಬಳಸಿದ ₹2 ಲಕ್ಷ ಮೌಲ್ಯದ ಓಮ್ನಿ ವ್ಯಾನ್ ಸೇರಿದಂತೆ ಒಟ್ಟು ರೂ ₹2,81,145 ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
READ | ಶರಾವತಿ ಸಿಂಗಳಿಕ ಅಭಯಾರಣ್ಯದಲ್ಲಿ ಜಿಂಕೆ ಬೇಟೆ, ಆರೋಪಿಗಳು ಅರೆಸ್ಟ್
ಫೆ.13ರಂದು ಸಾಗರ ಪಟ್ಟಣದ ಸೈಯದ್ ಷಫಾಜ್ ಅವರ ಚಿಲ್ಲರೆ ಅಂಗಡಿಯಲ್ಲಿ ಅಡಿಕೆ, ಕಾಳುಮೆಣಸು, ಗೇರು ಬೀಜಗಳನ್ನು ಕಳವು ಮಾಡಿರುವ ಬಗ್ಗೆ ದೂರು ನೀಡಿದ್ದರು. ಅದೇ ರೀತಿ, ಇನ್ನೊಂದು ಪ್ರಕರಣದಲ್ಲಿ ಮಾ.25ರಂದು ರಾಘವೇಂದ್ರ ಓಮ್ನಿ ವ್ಯಾನ್ ಕಳವು ಮಾಡಲಾಗಿತ್ತು. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದ್ದವು.
ತಂಡದ ಕಾರ್ಯಾಚರಣೆಗೆ ಶ್ಲಾಘನೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಎ.ಜಿ. ಕಾರಿಯಪ್ಪ ಮಾರ್ಗದರ್ಶನದಲ್ಲಿ ಸಾಗರ ಡಿವೈಎಸ್.ಪಿ ಗೋಪಾಲಕೃಷ್ಣ ಟಿ.ನಾಯಕ್ ಮೇಲ್ವಿಚಾರಣೆಯಲ್ಲಿ ಸೀತಾರಾಮ್, ಸಾಗರ ಟೌನ್ ಪೊಲೀಸ್ ಠಾಣೆ ಪಿಐ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಮಹೇಶ್ ಕುಮಾರ್, ಸಂತೋಷ ಭಾಗೋಜಿ, ಲಕ್ಷ್ಮಣ, ಸಿಬ್ಬಂದಿ ರತ್ನಾಕರ್, ವಿಶ್ವನಾಥ್, ಕೃಷ್ಣಮೂರ್ತಿ, ಮೆಹಬೂಬ್, ವಿಕಾಸ್, ಶಿಲ್ಪ ಅವರನ್ನೊಳಗೊಂಡ ತನಿಖಾ ತಂಡ ಪ್ರಕರಣವನ್ನು ಬೇಧಿಸಿದೆ. ತಂಡದ ಕಾರ್ಯವನ್ನು ಎಸ್.ಪಿ ಪ್ರಶಂಸಿಸಿದ್ದಾರೆ.
ಕೋವಿಡ್ ಸೈಡ್ ಎಫೆಕ್ಟ್, ಶೋಕಿಗಾಗಿ ಬೈಕ್ ಕಳವು ಮಾಡುತ್ತಿದ್ದ ಗ್ಯಾಂಗ್ ಸೆರೆ