ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಗುರುವಾರ ರಾತ್ರಿ ಭಾರಿ ಸ್ಫೋಟ ಸಂಭವಿಸಿದ್ದು, 6ಕ್ಕೂ ಅಧಿಕ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಬಿಹಾರಿ ಮೂಲದ ಕಾರ್ಮಿಖರೆಂದು ಹೇಳಲಾಗಿದೆ.
ಒಂದೂವರೆ ಕಿ.ಮೀ. ಧೂಳು ಆವೃತ | ಹುಣಸೋಡು ಗ್ರಾಮದಲ್ಲಿ ಕಲ್ಲು ಕ್ವಾರಿಯಲ್ಲಿ ಬಳಸುವುದಕ್ಕಾಗಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಒಂದು ಲಾರಿ ಡೈನಮೆಟ್ ಸ್ಫೋಟಗೊಂಡಿದ್ದು, ಕಾರ್ಮಿಕರು ಮೃತಪಟ್ಟಿದ್ದಾರೆ.
ಇನ್ನಷ್ಟು ಸುದ್ದಿ । ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಸ್ಫೋಟದ ಸದ್ದು ಬೆಚ್ಚಿ ಬಿದ್ದ ಜನ, ಎಲ್ಲಿ ಏನಾಗಿದೆ ಇಲ್ಲಿದೆ ಮಾಹಿತಿ , ಮಲೆನಾಡಿನಲ್ಲಿ ಮಹಾ ಸ್ಫೋಟದ ಅನುಭವ. ಇಲ್ಲಿವೆ ರೋಚಕ ಚಿತ್ರಗಳು
ಸ್ಫೋಟದ ತೀವ್ರತೆ ಎಷ್ಟಿತೆಂದರೆ, ಇಡೀ ಗ್ರಾಮವೇ ಅದುರಿದೆ. ಶಿವಮೊಗ್ಗದ ಎಲ್ಲ ತಾಲೂಕುಗಳು ಹಾಗೂ ಚಿಕ್ಕಮಗಳೂರಿನ ಒಂದೆರಡು ತಾಲೂಕುಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಆರಂಭದಲ್ಲಿ ಇದನ್ನು ಕಂಡು ಜನ ಗಾಬರಿಯಾಗಿದ್ದಾರೆ. ಅದಾದ ನಂತರ, ಇದಕ್ಕೆ ಕಾರಣ ಕಲ್ಲು ಕ್ವಾರಿಯಲ್ಲಾದ ಸ್ಫೋಟ ಎಂದು ಹೇಳಲಾಗಿದೆ. ಘಟನೆ ಸಂಬಂಧ ಯಾವುದೇ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇಲ್ಲ.
ಅಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಲಾರಿಯಲ್ಲಿ ಶೇಖರಿಸಲು ಅವಕಾಶವಾದರೂ ಹೇಗೆ ಕೊಡಲಾಯಿತು ಎಂಬಿತ್ಯಾದಿ ಪ್ರಶ್ನೆಗಳಿಗೆ ಇದುವರೆಗೆ ಉತ್ತರ ಸಿಕ್ಕಿಲ್ಲ.
ಶವಗಳು ಛಿದ್ರ, ಪಕ್ಕಾ ಲೆಕ್ಕ ಸಿಕ್ಕಿಲ್ಲ | ಹುಣಸೋಡು ಗ್ರಾಮದ ರೈಲ್ವೆ ಕ್ರಷರ್ ಸ್ಫೋಟಕ್ಕೆ ಆರು ಕಾರ್ಮಿಕರು ಮೃತಪಟ್ಟಿರುವುದಾಗಿ ಹೇಳಲಾಗಿದೆ. ಆದರೆ, ಈಗಲೇ ಎಷ್ಟು ಜನ ಮೃತಪಟ್ಟಿದ್ದಾರೆಂದು ಹೇಳಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಇದೆ. ಗ್ರಾಮದಲ್ಲಿ ಕರೆಂಟ್ ಸಂಪರ್ಕ ಕಟ್ ಆಗಿದೆ. ಕಿಲೋ ಮೀಟರ್ ಗಟ್ಟಲೇ ಧೂಳು ಆವರಿಸಿದೆ.
ಸ್ಫೋಟಗೊಂಡ ಸ್ಥಳಕ್ಕೆ ಅಧಿಕಾರಿಗಳ ದೌಡು | ಭಾರಿ ಸ್ಫೋಟದಿಂದ ಜನರನ್ನೇ ಬೆಚ್ಚಿ ಬೀಳಿಸಿದ್ದ ಹುಣಸೋಡು ಗ್ರಾಮಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್.ಪಿ. ಕೆ.ಎಂ.ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಸಂಖ್ಯೆ ಬೆಳಗ್ಗೆಯೇ ಸಿಗಲಿದೆ. ಸ್ಥಳಕ್ಕೆ ಶ್ವಾನ ದಳವನ್ನು ಕರೆದೊಯ್ಯಲಾಗಿದೆ.