ಸುದ್ದಿ ಕಣಜ.ಕಾಂ
ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದು, ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಡಿಎಚ್ಒ ಡಾ.ರಾಜೇಶ್ ಸುರಗಿಹಳ್ಳಿ ಹೇಳಿದರು.
READ | ಜಿಲ್ಲಾಡಳಿತದಿಂದ ಒಂದು ವಾರ ಲಾಕ್ ಡೌನ್ ಪರಿಷ್ಕೃತ ಆದೇಶ, ಬ್ಯಾಂಕ್ ಗಳಿಗಿಲ್ಲ ರಜೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಶನಿವಾರ ನಡೆದ ಖಾಸಗಿ ವೈದ್ಯರು, ಆಸ್ಪತ್ರೆಗಳ ಆಡಳಿತ ಸಂಸ್ಥೆಯ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಮಾತನಾಡಿದರು.
ಬೆಡ್, ಕಳೆಬರ ನೀಡುವುದಕ್ಕೆ ಈ ಸಂದರ್ಭದಲ್ಲಿ ಅನಗತ್ಯ ಕಿರಿಕಿರಿ, ಗಲಾಟೆಗಳನ್ನು ಆಸ್ಪತ್ರೆಯವರು ಮಾಡಿಕೊಳ್ಳುವುದು ಸರಿಯಲ್ಲ. ಹೀಗಾಗಿ, ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸೂಚನೆಗಳೇನು?
- ಟ್ರಿಯೇಜ್ ಸೆಂಟರ್ನಿಂದ ವೈದ್ಯರ ಸಲಹೆಯ ಮೇರೆಗೆ ಸೋಂಕಿತರಿಗಾಗಿ ಶೇ.50ರಷ್ಟು ಬೆಡ್ಗಳನ್ನು ಕಾಯ್ದಿರಿಸಬೇಕು.
- ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಿಂದ ನೀಡುತ್ತಿರುವ ಸೌಲಭ್ಯ, ಸೋಂಕಿತರ ವಿವರ, ದಾಖಲಾತಿ, ಚಿಕಿತ್ಸೆ ಇತ್ಯಾದಿಗಳ ಮಾಹಿತಿಯನ್ನು ಫೆಸಿಲಿಟಿ ತಂತ್ರಾಂಶ (ಆಪ್)ನಲ್ಲಿ ನಮೂದಿಸಬೇಕು
- ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ನಿಗದಿಪಡಿಸಿರುವ ದರ, ಹಾಸಿಗೆ ಲಭ್ಯತೆ, ಮಾಹಿತಿಯನ್ನು ನೋಟಿಸ್ ಬೋರ್ಡ್ನಲ್ಲಿ ಅಳವಡಿಸಬೇಕು
- ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟರೆ ಅವರ ಶವ ನೀಡುವುದಕ್ಕೆ ಸಂಬಂಧಿಕರೊಂದಿಗೆ ಕಿರಿಕಿರಿ ಮಾಡುವಂತಿಲ್ಲ.
https://www.suddikanaja.com/2021/03/20/creating-fraud-certificate-accused-arrested/