ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ಸ್ಮಾರ್ಟ್ ಸಿಟಿ ಅಡಿ ರಸ್ತೆ, ಚರಂಡಿ, ಪಾದಾಚಾರಿ ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ, ಎಲ್ಲವೂ ಅರ್ಧಂಬರ್ಧ ಆಗಿದ್ದು, ಮಳೆಯಿಂದಾಗಿ ಇಡೀ ನಗರ ಕೊಚ್ಚೆಯಾಗಿ ಮಾರ್ಪಟ್ಟಿದೆ. ರಸ್ತೆಯ ಮೇಲೆ ಎಲ್ಲಿ ಗುಂಡಿ ಇದೆ ಗೊತ್ತಾಗುತ್ತಿಲ್ಲ. ಹೀಗಾಗಿ, ಜನರು ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ.
https://www.suddikanaja.com/2020/12/26/smart-classes-in-all-government-schools-in-karnataka/
ಒಳಚರಂಡಿ ಕಾಮಗಾರಿ ಕೂಡ ನಡೆಯುತ್ತಿದ್ದು, ಅದಕ್ಕಾಗಿ ಅಲ್ಲಲ್ಲಿ ಬೃಹತ್ ಗುಂಡಿಗಳನ್ನು ತೋಡಲಾಗಿದೆ. ಮಣ್ಣನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದಾಗಿ, ರಸ್ತೆ ಇಡೀ ಮಣ್ಣು ಹರಡಿಕೊಂಡಿದ್ದು, ಜನಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಗಾಂಧಿ ನಗರದ ರಸ್ತೆಯನ್ನು ಹಲವು ದಿನಗಳ ಹಿಂದೆಯೇ ಅಗೆದು ಅದನ್ನು ಮುಚ್ಚಲಾಗಿದೆ. ಆದರೀಗ, ಮಳೆಯಿಂದಾಗಿ ರಸ್ತೆಗಳು ಹೊಂಡವಾಗಿ ಮಾರ್ಪಟ್ಟಿವೆ. ಎಲ್ಲಿ ನೋಡಿದರೂ ಕೆಸರು ಆವರಿಸಿಕೊಂಡಿದೆ. ಮಳೆಗಾಲಕ್ಕೂ ಮುನ್ನವೇ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕಾದ ಸ್ಮಾರ್ಟ್ ಸಿಟಿಯವರು ಅರ್ಧಕ್ಕೆ ಕೆಲಸಗಳನ್ನು ನಿಲ್ಲಿಸಿದ್ದಾರೆ. ಬಡಾವಣೆಗಳಲ್ಲಂತೂ ಹೇಳತೀರದ ಸ್ಥಿತಿ ಇದೆ. ಫುಟ್ಪಾತ್ ಗಾಗಿ ರಸ್ತೆಯ ಎಎರಡೂ ಬದಿ ಅಗೆದು ಕಾಂಕ್ರಿಟ್ ಹಾಕಲಾಗಿದೆ. ಕಳೆದ ಆರೇಳು ತಿಂಗಳಿಂದ ಇದೇ ಸ್ಥಿತಿ ಇದ್ದು, ಒಂದಿಂಚು ಕೆಲಸವೂ ಸಾಗುತ್ತಿಲ್ಲ. ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಜನರಿಗೆ ಆಗುತ್ತಿರುವ ಸಮಸ್ಯೆಗೆ ಕೊನೆಗಾಣಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.
https://www.suddikanaja.com/2021/06/13/monsoon-rain-started-in-shivamogga/