ಸುದ್ದಿ ಕಣಜ.ಕಾಂ | DISTRICT | AGRICULTURE
ಶಿವಮೊಗ್ಗ: ಆಯನೂರು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಪೋಷಕರ ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸುವ ಹೊಸ ಪ್ರಯತ್ನ ನಡೆಸಲಾಯಿತು. ಈ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
https://www.suddikanaja.com/2021/01/05/crop-survey-by-farmers/
ಎಲ್ಲೆಲ್ಲಿ ನಡೀತು ತರಬೇತಿ?
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಆಯನೂರು, ಕುಂಸಿ ಮತ್ತು ಹಾರನಹಳ್ಳಿ ಗ್ರಾಮಾಂತರ ಪ್ರದೇಶದ ರೈತರ ಮಕ್ಕಳಾದ ಈ ವಿದ್ಯಾರ್ಥಿಗಳಿಗೆ ಬೆಳೆ ಸಮೀಕ್ಷೆಯ ಆ್ಯಪ್ ಬಳಕೆ ವಿಧಾನವನ್ನು ತಿಳಿಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಎಚ್.ಎಸ್. ಶಿವರಾಜ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಕಲಿತಿದ್ದಾರೆ. ಸಂದೇಶ ಮತ್ತು ಪಠ್ಯ ಕ್ರಮಗಳ ಕಲಿಕೆಗೆ ಟ್ಯಾಬ್ ಬಳಕೆಯನ್ನು ಮಾಡುತ್ತಿದ್ದಾರೆ. ಇಲಾಖೆಯ ಆಶಯದಂತೆ ರೈತರು ತಮ್ಮ ಬೆಳೆಗಳ ಸಮೀಕ್ಷೆಯನ್ನು ತಾವೇ ಮಾಡಬೇಕಾಗಿದ್ದು, ಬಹುತೇಕ ಆಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬೆಳೆ ಸಮೀಕ್ಷೆ ಆ್ಯಪ್ ಡೌನ್ ಲೋಡ್ ಮಾಡಿ, ಬೆಳೆ ಸಮೀಕ್ಷೆಗೆ ಸಿದ್ಧರಾಗಿರುವುದಾಗಿ ತಿಳಿಸಿದರು.
https://www.suddikanaja.com/2021/03/22/training-for-farmers-children/
ಬೆಳೆ ಸಮೀಕ್ಷೆ ದತ್ತಾಂಶ ಸಹಕಾರಿ
ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆಯಲ್ಲಿ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಕೊಳ್ಳಲು ಬೆಳೆ ಸಮೀಕ್ಷೆ ದತ್ತಾಂಶವು ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ಇಂತಹ ಸಮಯದಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಬೆಳೆ ಸಮೀಕ್ಷೆ ಮಾಡುವುದರ ಮೂಲಕ ತಮ್ಮ ಜಮೀನಿನಲ್ಲಿ ಬೆಳೆದ ಎಲ್ಲ ಬೆಳೆಗಳನ್ನು ನಮೂದಿಸಬಹುದು. ಇದರಿಂದ ಇಲಾಖೆಯ ಯೋಜನೆಗಳಾದ ಬೆಳೆ ವಿಮೆ, ಪಹಣಿಯಲ್ಲಿ ಬೆಳೆ ನಮೂದಿಸುವುದು, ಬೆಳೆ ನಷ್ಟ ಪರಿಹಾರ, ತಮ್ಮ ಬೆಳೆಗಳಿಗೆ ಸಂಬಂದಿಸಿದಂತೆ ಬ್ಯಾಂಕ್ ಗಳಲ್ಲಿ ಬೆಳೆ ಸಾಲ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಕೃಷಿ ಅಧಿಕಾರಿಗಳಾದ ಟಿ.ಡಿ.ಯೋಗಿತಾ, ಜಿ.ಅಶ್ವಿನಿ, ಕಾಲೇಜಿನ ಪ್ರಾಂಶುಪಾಲರು, ಸಹಪ್ರಾಧ್ಯಾಪಕರು ಹಾಜರಿದ್ದರು.
https://www.suddikanaja.com/2020/12/16/crop-survey-application-for-farmers/