ಸುದ್ದಿ ಕಣಜ.ಕಾಂ | CITY | CITIZEN VOICE
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್.ಎಂ.ಎಲ್.ನಗರದಲ್ಲಿ ರಸ್ತೆ ಅಗೆದು 45 ದಿನಗಳು ಕಳೆದಿವೆ. ಆದರೆ, ಇದುವರೆಗೆ ಕಾಮಗಾರಿಯೂ ಪೂರ್ಣಗೊಳಿಸಿಲ್ಲ. ಗುಂಡಿಯೂ ಮುಚ್ಚಿಲ್ಲ. ಇದರಿಂದಾಗಿ, ಜನ ನಿತ್ಯ ಸಂಕಟಪಡುತ್ತಿದ್ದಾರೆ.
ಚರಂಡಿ ಕಾಮಗಾರಿಗಾಗಿ ರಸ್ತೆಯ ನಡುವೆಯೇ ಅಗೆಯಲಾಗಿದೆ. ಇದರಿಂದಾಗಿ, ಸಂಪರ್ಕವೇ ಕಡಿತಗೊಂಡಿದೆ. ಈ ಬಗ್ಗೆ ಸ್ಥಳೀಯರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಕಾಮಗಾರಿ ಪ್ರಗತಿಯಲ್ಲಿರುವ ಜಾಗದಲ್ಲಿ ಯಾವುದೇ ಸೂಚನಾಫಲಕಗಳನ್ನು ಅಳವಡಿಕೆ ಮಾಡಿಲ್ಲ. ಹೀಗಾಗಿ, ರಾತ್ರಿ ವೇಳೆ ಏನಾದರೂ ವಾಹನ ಸವಾರರು ಈ ಭಾಗದಲ್ಲಿ ಬಂದರೆ ಅವಘಡ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ, ಕೂಡಲೇ ಅಗೆದಿರುವ ಗುಂಡಿಯನ್ನು ಮುಚ್ಚಬೇಕು ಮತ್ತು ಆಮೆವೇಗದಲ್ಲಿ ಸಾಗುತ್ತಿರುವ ಕೆಲಸ ಪೂರ್ಣಗೊಳಿಸಬೇಕು ಎಂದು ವಾರ್ಡ್ ಮಾಜಿ ಕಾರ್ಪೋರೇಟರ್ ಸೈಯ್ಯದ್ ವಾಹೀದ್ ಅದ್ಡು ಆಗ್ರಹಿಸಿದ್ದಾರೆ.
(ಓದುಗರ ಗಮನಕ್ಕೆ- ನಿಮ್ಮ ಭಾಗದಲ್ಲಿ ಸಮಸ್ಯೆ ಯಾವುದೇ ಆಗಿರಲಿ. ನಮ್ಮ ಗಮನಕ್ಕೆ ತನ್ನಿ. ನಮ್ಮ ವಾಟ್ಸಾಪ್ ಸಂಖ್ಯೆ 94831 30291 ಕಳುಹಿಸಿ.)
https://www.suddikanaja.com/2021/07/19/suddi-kanaja-impact/