ಸುದ್ದಿ ಕಣಜ.ಕಾಂ | DISTRICT | MAMCOS
ಶಿವಮೊಗ್ಗ: ಅಡಿಕೆ ಧಾರಣೆಗೆ ಅನುಗುಣವಾಗಿ ಸಾಲದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ (ಮ್ಯಾಮ್ಕೋಸ್) ಸದಸ್ಯರು ಒತ್ತಾಯಿಸಿದರು.
ಸಂಘದ ಸದಸ್ಯರು ದೀರ್ಘ ಸಮಯದವರೆಗೆ ಅಡಿಕೆ ದಾಸ್ತಾನು ಮಾಡುತ್ತಿದ್ದಾರೆ. ವ್ಯಾಪಾರಕ್ಕೆ ಹಾಕುವುದು ಮತ್ತು ವಾಪಸ್ ಪಡೆಯುವುದು ಮಾಡುತಿದ್ದಾರೆ. ಇದು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಿಬ್ಬಂದಿಯ ಮೇಲೆಯೂ ಕಾರ್ಯಬಾಹುಳ್ಯ ಹೆಚ್ಚುತ್ತಿದೆ. ಇದನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸುವುದು. ಈ ನಿಟ್ಟಿನಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.
– ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ
ಅಡಿಕೆ ಸಂಶೋಧನೆಗೆ ನೀಡಬೇಕಿದೆ ಒತ್ತು
ಅಡಿಕೆ ಸಂಶೋಧನೆಗೆ ಅಧಿಕ ಒತ್ತು ನೀಡಬೇಕು. ಸಂಶೋಧನೆಗೆ ವಾರ್ಷಿಕ ಶೇ.3ರಷ್ಟು ಮೀರದಂತೆ ನಿಧಿ ಮೀಸಲು ಇರಿಸಲಾಗುತ್ತಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಂಶೋಧನೆಗಳು ನಡೆಯುತ್ತಿಲ್ಲ ಎಂದು ಸಂಘದ ಸದಸ್ಯ ತಮ್ಮಪ್ಪ ಹೆಗಡೆ ಹೇಳಿದರು.
ಸಭೆಯಲ್ಲಿ ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ನಿರ್ದೇಶಕರಾದ ವೈ.ಎಸ್.ಸುಬ್ರಹ್ಮಣ್ಯ, ಸುರೇಶ್ಚಂದ್ರ, ಸಿ.ಬಿ.ಈಶ್ವರಪ್ಪ, ಬಿ.ಸಿ.ನರೇಂದ್ರ, ಎಂ.ಡಿ ಆರ್.ರಾಘವೇಂದ್ರ ಉಪಸ್ಥಿತರಿದ್ದರು.
https://www.suddikanaja.com/2020/11/11/cm-formula-does-to-increase-the-punishment-act/