ಸುದ್ದಿ ಕಣಜ.ಕಾಂ | TALUK | POLITICAL NEWS
ಶಿಕಾರಿಪುರ(ಶಿರಾಳಕೊಪ್ಪ): ಶಿವಮೊಗ- ಶಿಕಾರಿಪುರ- ರಾಣೇಬೆನ್ನೂರು ರೈಲ್ವೆ ಯೋಜನೆಯ ವಿವಿಧ ಕೆಲಸಗಳು ಪ್ರಾರಂಭವಾಗಿವೆ. ಇದು ಸ್ವಾತಂತ್ರ್ಯ ನಂತರ ಮೊದಲನೇ ರೈಲ್ವೇ ಯೋಜನೆ ನಮ್ಮ ಶಿಕಾರಿಪುರದಲ್ಲಿ ಆಗುತ್ತಿದೆ. ಇಂತಹ ಸಮಯದಲ್ಲಿ ಇದಕ್ಕೆ ಕಲ್ಲು ಹಾಕುವ ಕೆಲಸನೆಡೆದರೆ ಸಹಿಸಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿಕಾರಿಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ 2014-2015ನೇ ಸಾಲಿನ ಡಬ್ಲ್ಯುಐಎಫ್ ಯೋಜನೆ ಅಡಿಯಲ್ಲಿ ಮಂಜೂರಾದ ಸಮಿತಿ ವ್ಯಾಪ್ತಿಯ ನಿಂಬೆಗೊಂದಿ, ಸಾಲೂರು, ತಾಳಗುಂದ ಮತ್ತು ಹರುಗುವಳ್ಳಿ ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮೀಣ ಗೋದಾಮುಗಳು ಹಾಗೂ 2019-2020ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಶಿರಾಳಕೊಪ್ಪ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ `ರೈತ ಭವನ’ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ರಾಜಕಾರಣ ಮಾಡೋಣ. ಆದರೆ, ಅಭಿವೃದ್ಧಿಗೆ ಕಲ್ಲು ಹಾಕುವ ಕೆಲಸ ಮಾಡಬಾರದು ಎಂದರು.
READ | ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಡೇಟ್ ಫಿಕ್ಸ್, ಮುಂದಿನ ವಾರ ಸಿದ್ಧವಾಗಲಿದೆ ಡ್ರಾಫ್ಟ್
ಅಭಿವೃದ್ಧಿಯಲ್ಲಿ ಶಿಕಾರಿಪುರ ನಂ.1
ಜಿಲ್ಲಾ ಕೇಂದ್ರದಲ್ಲಿರುವ ಆರೋಗ್ಯ ವ್ಯವಸ್ಥೆ ನಂತರ ಶಿಕಾರಿಪುರ ತಾಲೂಕಿನಲ್ಲಿ ಹೆಚ್ಚು ಹಾಸಿಗೆ ವ್ಯವಸ್ಥೆ ಇದೆ. ರಾಜ್ಯದಲ್ಲೇ ಉತ್ತಮ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರದ್ದಾಗಿದೆ. ಶಿಕ್ಷಣಕ್ಕೆ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ತಾಲೂಕಿನಲ್ಲಿ ಸಾವಿರಾರು ಕೋಟಿಯ ನೀರಾವರಿ ಯೋಜನೆಯ ಕೆಲಸ ಮುಗಿದಿದೆ ಎಂದು ಹೇಳಿದರು.
ಅಂತರ ರಾಷ್ಟ್ರೀಯ ಸಿರಿಧಾನ್ಯ ವರ್ಷ
ಕೇಂದ್ರದ ಬಜೆಟ್ ನಲ್ಲಿ ಈ ವರ್ಷ ಅಂತರ ರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಲಾಗಿದೆ. ಇದು ಕೇವಲ ಘೋಷಣೆಯಾಗಿ ಉಳಿಯದೆ, ನಮ್ಮ ರೈತರು ಬೆವರು ಸುರಿಸಿ ಬೆಳೆದ ಧಾನ್ಯಕ್ಕೆ ಹೆಚ್ಚಿನ ಬೆಲೆ ಸಿಗಲಿದೆ. ಸಾವಯವ ಕೃಷಿಗೆ ಆದ್ಯತೆ ನೀಡಿ ಹಣ ಇಡುವ ಕೆಲಸ ಮಾಡಿದ್ದಾರೆ. ತಿನ್ನುವ ಅನ್ನ ವಿಷ ಆಗಬಾರದೆಂದು ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡಿದೆ.
READ | ಒಂದೇ ಜಾಗದಲ್ಲಿ 192 ದೇಶಗಳ ಭೇಟಿ ಅನುಭವ, ದುಬೈಗೆ ಹೋಗಲು ಸುವರ್ಣಾವಕಾಶ, ಶಿವಮೊಗ್ಗದಿಂದ ಹೋಗಲು ಇಂದೇ ಸಂಪರ್ಕಿಸಿ
ಶಿಕಾರಿಪುರ ಎಪಿಎಂಸಿ ಅಧ್ಯಕ್ಷ ಬಿ.ರುದ್ರಮುನಿ, ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ.ರೇವಣಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚೆನ್ನವೀರಪ್ಪ, ಅಗಡಿ ಅಶೋಕ್, ಬಿ.ಡಿ. ಭೂಕಂತ್, ಶಿರಾಳಕೊಪ್ಪ ಪುರಸಭೆ ಅಧ್ಯಕ್ಷೆ ಮಂಜುಳಾ ಟಿ.ರಾಜು. ನಿರ್ಮಲ ಪರಮೇಶ್ವರಪ್ಪ, ಸುಧೀರ್, ಎಪಿಎಂಸಿ ನಿರ್ದೇಶಕರು ಸದಸ್ಯರು ಮತ್ತು ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
https://www.suddikanaja.com/2020/11/22/demand-raise-for-historical-authority-in-shikaripura/