ಸುದ್ದಿ ಕಣಜ.ಕಾಂ | DISTRICT | HARSHA MURDER CASE
ಶಿವಮೊಗ್ಗ: ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಯಬೇಕು. ಈ ಬಗ್ಗೆ ಸಿಎಂಗೂ ಮನವಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಾಟೆಗೆ ಕಾರಣ ಯಾರು ಎಂಬುವುದು ಹೊರಗೆ ಬರಬೇಕಾದರೆ ಉನ್ನತ ತನಿಖೆಯ ಅಗತ್ಯವಿದೆ. ಈ ಹಿಂದೆ ವಿಶ್ವನಾಥ್ ಅವರ ಕೊಲೆಯಾದಾಗ ಅನ್ಯ ಕೋಮಿನ ಕೆಲವರು ಹೊರಗಡೆಯಿಂದ ಬಂದಿದ್ದರು. ಅದೇ ರೀತಿ ಇಂದಿನ ಘಟನೆಯಲ್ಲೂ ನಡೆದಿದೆ ಎಂದು ತಿಳಿಸಿದರು.
RELATED NEWS
ಆ ಮುಖಗಳನ್ನೇ ಕಂಡಿಲ್ಲ, ಅವರು ಹೊರಗಡೆಯವರಿರಬೇಕು
ಹರ್ಷ ಸಾವಿನಿಂದ ಕುಟುಂಬ ದುಃಖದಲ್ಲಿತ್ತು. ಇನ್ನೊಂದೆಡೆ ಸೀಗೆಹಟ್ಟಿಯ ಹಲವೆಡೆ ಹಿಂದೂ ಯುವಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ ಹೇರುತ್ತಿದ್ದರು. ಆದರೆ, ಇನ್ನೂ ಕೆಲವರು ಅಶ್ಲೀಲ ಪದ ಪ್ರಯೋಗ ಮಾಡುತ್ತಿದ್ದವರು. ಆದರೆ, ಅವರಾರೂ ಶಿವಮೊಗ್ಗ ನಗರದವರು ಅಲ್ಲ ಎಂಬ ಅನುಮಾನ ನನಗಿದೆ. ಹೀಗಾಗಿ, ತನಿಖೆಯ ಅಗತ್ಯವಿದೆ ಎಂದರು.
ಪೊಲೀಸರ ನಿಯಂತ್ರಣ ತಪ್ಪಿದ ಗಲಾಟೆ
ಮೆರವಣಿಗೆ ವೇಳೆ ಭಾರಿ ಸಂಖ್ಯೆಯಲ್ಲಿ ಜನ ಸೇರಿ ಗಲಾಟೆ ನಡೆದಿದೆ. ಇದು ಪೊಲೀಸರ ನಿಯಂತ್ರಣ ತಪ್ಪಿತ್ತು. ದುಃಖದಲ್ಲಿದ್ದರೂ ಹಿಂದೂ ಯುವಕರು ಶಾಂತಿಯಿಂದಿಲೇ ಇದ್ದರು. ಆದರೆ, ಏಕಾಏಕಿ ಗಲಾಟೆ ನಡೆದಿದೆ. ಕಲ್ಲು ತೂರಾಟ ಮಾಡಲಾಗಿದೆ. ಅದರಲ್ಲೂ ಗಾಂಧಿ ಬಜಾರ್ ದಾಟಿದ ನಂತರ ಘಟನೆಗಳು ನಡೆದಿರುವುದರಿಂದ ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.
https://www.suddikanaja.com/2022/02/21/bajrang-dal-activist-harshas-killed-by-a-persons-and-procession-started/