ಸುದ್ದಿ ಕಣಜ.ಕಾಂ | TALUK | RAIN FALL
ಸೊರಬ: ತಾಲೂಕಿನಾದ್ಯಂತ ಭಾರಿ ವರ್ಷಧಾರೆಯಾಗಿದ್ದು, ಅನಾಹುತವನ್ನೇ ಸೃಷ್ಟಿಸಿದೆ. ಒಟ್ಟು 250 ಕೋಟಿ ರೂಪಾಯಿ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಏನೇನು ಹಾನಿ
ತಾಲೂಕು ವ್ಯಾಪ್ತಿಯಲ್ಲಿ 55 ಮನೆಗಳಿಗೆ ಹಾನಿಯಾಗಿದೆ. 35 ಅಡಿಕೆ ಮರ, 150 ಎಕರೆಗೂ ಅಧಿಕ ಬಾಳೆ ತೋಟ, ಜೋಳಕ್ಕೆ ಹಾನಿಯಾಗಿದೆ. ಮಳೆ ಸೃಷ್ಟಿಸಿದ ಅನಾಹುತದ ಬಗ್ಗೆ ಶಾಸಕ ಕುಮಾರ ಬಂಗಾರಪ್ಪ ಅವರು ಅಧಿಕಾರಿಗಳ ಸಭೆ ಕೂಡ ನಡೆಸಿದ್ದು, ಮಾಹಿತಿಯನ್ನು ಪಡೆದಿದ್ದಾರೆ. ತ್ವರಿತವಾಗಿ ಪರಿಹಾರ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ.