ಸುದ್ದಿ ಕಣಜ.ಕಾಂ | DISTRICT | 30 OCT 2022
ಶಿವಮೊಗ್ಗ(Shivamogga): ತಾಲೂಕಿನ ಅಬ್ಬಲಗೆರೆ(Abbalagere)ಯ ಕೆರೆ ಸಮೀಪ ಶುಕ್ರವಾರ ರಾತ್ರಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿಕಿತ್ಸೆಗೋಸ್ಕರ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಪಾಳ ನಿವಾಸಿ ಪ್ರತಾಪ್ ಸಿಂಗ್ ಎಂಬುವವರು ಗಂಭೀರ ಗಾಯಗೊಂಡಿದ್ದಾನೆ. ಉತ್ತರ ಪ್ರದೇಶ ಮೂಲದ ಈತ ಶಿವಮೊಗ್ಗದ ಯುವತಿಯನ್ನು ವಿವಾಹವಾಗಿದ್ದ.
ಪತ್ನಿಯ ಸಹೋದರಿಯನ್ನು ಕೊಮ್ಮನಾಳು ಸಮೀಪದ ಬೀರನಕೆರೆ ಗ್ರಾಮಕ್ಕೆ ಬಿಟ್ಟು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/10/30/person-dies-on-saturday-morning-after-being-hit-by-a-train-at-arasalu/