ಸುದ್ದಿ ಕಣಜ.ಕಾಂ ಹೊಸನಗರ
HOSANAGAR: ಹೊಸನಗರ ತಾಲೂಕಿನ ಹುಲಿಕಲ್ (Hulikal) ಗ್ರಾಮದಲ್ಲಿ ಗುರುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಬಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಮಾಸ್ತಿಕಟ್ಟೆ ಸಮೀಪದ ಹುಲುಗಾರ ಕಂಪದಕೈ ಗ್ರಾಮದ ರವಿ(45), ಶಿಶಿರ(12) ಮೃತರು. ರವಿ ಅವರ ಪತ್ನಿ ಶಾಲಿನಿ(40) ಗಾಯಗೊಂಡಿದ್ದಾರೆ.
ಇವರು ಹುಲಿಕಲ್ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಿಂದ ಮನೆಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ.
READ | ಶಿವಮೊಗ್ಗದ ಎಲ್ಲ ಖಾಸಗಿ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆಗೆ 10 ದಿನಗಳ ಡೆಡ್ಲೈನ್, ಕಾರಣವೇನು?
ನಡೆದಿದ್ದೇನು?
ಬಾಲಕ ಶಿಶಿರನನ್ನು ಬಸ್ಸಿಗೆ ಕಳುಹಿಸುವುದಕ್ಕಾಗಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದಾಗ ಟ್ಯಾಂಕರ್’ವೊಂದು ಮೂವರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ರವಿ ಮತ್ತು ಶಿಶಿರನ ತಲೆಯ ಮೇಲಿನಿಂದ ಹಾಗೂ ಶಾಲಿನಿ ಅವರ ಕಾಲಿನ ಮೇಲುಗಡೆಯೇ ವಾಹನದ ಚಕ್ರಗಳು ಹರಿದಿವೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಶಾಲಿನಿ ಕಾಲು ಕಾಲು ತುಂಡಾಗಿದೆ. ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೀಕರ ಅಪಘಾತದಲ್ಲಿ ಹುಲಿಕಲ್ ಗ್ರಾಮದ ರಸ್ತೆಯು ರಕ್ತಮಯವಾಗಿತ್ತು. ಈ ಹೃದಯವಿದ್ರಾವಕ ಘಟನೆ ಕಂಡು ಜನ ಮರುಗಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.