ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮೆಡಿಕಲ್’ನಲ್ಲಿ ಮಾತ್ರೆ ಖರೀದಿಸುವಾಗ ಕಣ್ಮುಂದೆಯೇ ಬೈಕ್ ಕದ್ದು ಪರಾರಿಯಾದ ಘಟನೆ ಆರ್.ಎಂ.ಎಲ್.ನಗರದಲ್ಲಿ ಇತ್ತೀಚೆಗೆ ನಡೆದಿದೆ.
READ | ತಾಳಗುಪ್ಪ-ಮೈಸೂರು ರೈಲಿಗೆ ಸಿಲುಕಿದ ಪ್ರಯಾಣಿಕ, ಪ್ರಾಣದ ಹಂಗು ತೊರೆದು ರಕ್ಷಣೆ
ಹೊಸಹಳ್ಳಿಯ ಲಕ್ಷ್ಮೀಪುರ ತಾಂಡಾದ ವ್ಯಕ್ತಿಯೊಬ್ಬರ ಬೈಕ್ ಅನ್ನು ಕಳ್ಳತನ ಮಾಡಲಾಗಿದೆ. ಮಿಳಘಟ್ಟದಲ್ಲಿರುವ ತನ್ನ ಸ್ನೇಹಿತನನ್ನು ಕರೆದುಕೊಂಡು ಹೋಗುವ ಉದ್ದೇಶದಿಂದ ತಮ್ಮ ಗ್ರಾಮದ ಪರಿಚಯಸ್ಥರ ಬೈಕ್ ಅನ್ನು ತಂದಿದ್ದ. ಅದನ್ನು ಕಳವು ಮಾಡಲಾಗಿದೆ.
ಬೈಕ್’ನಲ್ಲಿತ್ತು ಎರಡು ಮೊಬೈಲ್
ಕಳವಾದ ಬೈಕಿನ ಬ್ಯಾಗಿನಲ್ಲಿ ಎರಡು ಸ್ಮಾರ್ಟ್ ಫೋನ್ ಇಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/12/11/lorry-car-accident-near-kallapura-3-students-died/