ಸುದ್ದಿ ಕಣಜ.ಕಾಂ ಸಾಗರ
SAGAR: ಮನೆಯ ಪಕ್ಕದ ಖಾಲಿ ಜಾಗದಲ್ಲಿ ಇಟ್ಟಿದ್ದ ಬೋರ್ ವೆಲ್’ಗೆ ಅಳವಡಿಸುವ ಕೇಸಿಂಗ್ ಪೈಪ್’ಗಳನ್ನು ಕಳ್ಳತನ ಮಾಡಿದ ಪ್ರಕರಣವನ್ನು ಸಾಗರ ಗ್ರಾಮಾಂತರ ಪೊಲೀಸರು ಬೇಧಿಸಿದ್ದಾರೆ. ಪ್ರಕರಣದ 1ನೇ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹೊಸನಗರ (hosanagar) ತಾಲೂಕು ಹಾಲುಗುಡ್ಡ ಗ್ರಾಮದ ಚಿರಂಜೀವಿ ಅಲಿಯಾಸ್ ಚಿರು ಅಲಿಯಾಸ್ ಚಿನ್ನ(35) ಬಂಧಿತ ಆರೋಪಿ.
READ | ಭದ್ರಾವತಿ ಸಿಡಿಪಿಓಗೆ ₹1.20 ಲಕ್ಷ ನೀಡುವಂತೆ ಧಮ್ಕಿ, ಕಾರಣವೇನು?
2023ರ ಫೆಬ್ರವರಿ 17ರಂದು ಮುಂಬಾಳು ಗ್ರಾಮದ ನಿವಾಸಿ ಬೋರ್ ವೆಲ್ ಕಂಟ್ರಾಕ್ಟರ್ ಆದ ಲೋಕನಾಥ್ ಅವರು ತಮ್ಮ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದ ಬೋರ್ ವೆಲ್ ಗೆ ಅಳವಡಿಸುವ ಕೇಸಿಂಗ್ ಪೈಪ್ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ತನಿಖಾ ತಂಡದ ಕಾರ್ಯಕ್ಕೆ ಶ್ಲಾಘನೆ
ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ. ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶದಲ್ಲಿ ಹಿರಿಯ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮೇಲ್ವಿಚಾರಣೆಯಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಕಾರ್ಗಲ್ ಠಾಣೆ ಪಿಎಸ್ಐ ನಾರಾಯಣ ಮಧುಗಿರಿ, ತಿರುಮಲೇಶ್, ಎಸ್.ಪಿ ಹೊಸಮನಿ, ಪೊಲೀಸ್ ಸಿಬ್ಬಂದಿ ಸನಾವುಲ್ಲಾ, ಷೇಖ್ ಪೈರೋಜ್ ಅಹಮದ್, ರವಿಕುಮಾರ್, ಹನುಮಂತ ಜಂಬೂರ್ ಅವರುಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ವಶಕ್ಕೆ ಪಡೆದ ಹಣವೆಷ್ಟು?
ಆರೋಪಿತನಿಂದ ಅಂದಾಜು ಮೌಲ್ಯ ₹2,00,000 ಬೋರ್ ವೆಲ್ ಕೇಸಿಂಗ್ ಪೈಪ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ ₹10,00,000 ಟಿಪ್ಪರ್ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
MCC Violation | ಸೋಮಿನಕೊಪ್ಪ ಧಾರ್ಮಿಕ ಕೇಂದ್ರದಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಮುಖಂಡರ ವಿರುದ್ಧ ಕೇಸ್