ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ತೀರ್ಥ ಮುತ್ತೂರಿನಲ್ಲಿ ಘಟನೆ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಬಾಲಾಜಿ(38), ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಪುನೀತ್(35) ಎಂಬುವವರು ಮೃತಪಟ್ಟಿದ್ದಾರೆ. ಇಬ್ಬರೂ ವಿವಾಹಿತರಾಗಿದ್ದು, ಮಕ್ಕಳಿದ್ದಾರೆ.
READ | ಶಿವಮೊಗ್ಗ, ಭದ್ರಾವತಿಯಲ್ಲೇ ಹೆಚ್ಚು ಬಾಲ್ಯ ವಿವಾಹ ಪ್ರಕರಣ, ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್
ಹೇಗೆ ನಡೆಯಿತು ಘಟನೆ?
ನಿಟ್ಟೆ ಇಂಜಿನಿಯರಿಂಗ್ ಕಾಲೇನಲ್ಲಿ ವ್ಯಾಸಂಗ ಮಾಡಿದ್ದ ತೀರ್ಥ ಮುತ್ತೂರು ಗ್ರಾಮದ ವಿದ್ಯಾರ್ಥಿಯ ಮನೆಗೆ ಸಂತೋಷ ಕೂಟಕ್ಕೆಂದು ಸುಮಾರು 15ಕ್ಕೂ ಅಧಿಕ ಜನ ಪ್ರಾಧ್ಯಾಪಕರು, ಸಿಬ್ಬಂದಿ ಮತ್ತು ಉಪನ್ಯಾಸಕರು ಆಗಮಿಸಿದ್ದರು. ಶನಿವಾರ ಊರಿಗೆ ಬಂದಿದ್ದ ಇವರು ಸ್ಥಳೀಯ ಪ್ರವಾಸಿ ತಾಣಗಳನ್ನು ವೀಕ್ಷಿಸುವುದಕ್ಕಾಗಿ ತೆರಳಿದ್ದಾರೆ. ಆಗ ಘಟನೆ ಸಂಭವಿಸಿದೆ.
ರಕ್ಷಣೆಗೆಂದು ತೆರಳಿದ ಬಾಲಾಜಿಯೂ ಸಾವು
ತೀರ್ಥ ಮುತ್ತೂರು ಮಠದ ಹತ್ತಿರವಿರುವ ತುಂಗಾನದಿಗೆ ಪುನೀತ್ ಇಳಿದಿದ್ದಾನೆ. ಆಗ ಆತ ಸುಳಿಗೆ ಸಿಲುಕಿ ಮುಳುಗುವಾಗ ಬಾಲಾಜಿ ರಕ್ಷಣೆಗೆ ಮುಂದಾಗಿದ್ದಾರೆ. ಪುನೀತ್, ಬಾಲಾಜಿ ಇಬ್ಬರೂ ಈಜಲು ಸಾಧ್ಯವಾಗದೇ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shimoga Airport | ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಡೇಟ್ ಫಿಕ್ಸ್, ಯಾವ ಮಾರ್ಗದಲ್ಲಿ ವಿಮಾನಯಾನ ಸೇವೆ?