ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಾದ್ಯಂತ ಮಳೆಯಾಗಿದ್ದು, ತೀರ್ಥಹಳ್ಳಿ, ಸಾಗರ ಸೇರಿದಂತೆ ಹಲವೆಡೆ ಮಳೆ ಅನಾಹುತ ಸೃಷ್ಟಿಸಿದೆ. ಮನೆ ಹಾಗೂ ಶಾಲೆ ಚಾವಣಿ ಕುಸಿದಿದೆ.
READ | ಲಿಂಗನಮಕ್ಕಿ ಜಲಾಶಯದಲ್ಲಿ ಎರಡು ಅಡಿ ನೀರು ಹೆಚ್ಚಳ, ಉಳಿದ ಡ್ಯಾಂಗಳ ಸ್ಥಿತಿ ಹೇಗಿದೆ?
ಎಲ್ಲಿ ಏನಾಗಿದೆ?
- ಸಾಗರ ನೆಹರೂ ನಗರದ ಅರಳಿಕಟ್ಟೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಕುಸಿದಿದೆ. ಇದೇ ಶಾಲೆಯ ಚಾವಣಿಯು ಇತ್ತೀಚೆಗೆ ಕುಸಿದಿತ್ತು. ಅದೃಷ್ಟವಶಾತ್ ಬೆಳಗಿನ ಜಾವ ಘಟನೆ ಸಂಭವಿಸಿದ್ದರಿಂದ ಜೀವಹಾನಿ ಆಗಿರಲಿಲ್ಲ.
- ತೀರ್ಥಹಳ್ಳಿ ತಾಲ್ಲೂಕಿನ ಬಾಂಡ್ಯಕುಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಕಾನಿ ಗ್ರಾಮದ ಕಮಲಮ್ಮ ಎಂಬುವವರ ಮನೆಯ ಚಾವಣಿ ಕುಸಿದಿದೆ. ಗಂಟೇಜನಗಲ್ ಗ್ರಾಮದ ವೇದ ಅವರ ಮನೆ ಗೋಡೆ ಕುಸಿದಿದೆ. ಶೇಡ್ಗಾರ್ ಗ್ರಾಪಂ ವ್ಯಾಪ್ತಿಯ ಬೊಮ್ಮನಹಳ್ಳಿಯ ಸರೋಜನಶೆಟ್ಟಿ ಅವರಿಗೆ ಸೇರಿದ ಜಾನುವಾರು ಕೊಟ್ಟಿಗೆ ಕುಸಿದುಬಿದ್ದಿದೆ. ಸಾಲ್ಗಡಿ ಗ್ರಾಪಂ ವ್ಯಾಪ್ತಿಯ ಕಟಗಾರು ಗ್ರಾಮದಲ್ಲಿ ವಿಜಯ ವಿಠಲನಾಯಕ್ ಮನೆಯ ಮೇಲೆ ಭಾರಿ ಗಾತ್ರದ ಮರ ಉರುಳಿದ್ದು, ಮನೆ ಜಖಂಗೊಂಡಿದೆ.
Western Ghats | ಚಿಲಿ ಮಾದರಿಯ ಅಗ್ನಿ ಅವಘಡ ಪಶ್ಚಿಮಘಟ್ಟದಲ್ಲಿ ಸಂಭವಿಸುವ ಸಂಭವ, ಎಚ್ಚರಿಕೆ ನೀಡಿದ ನಾಗೇಶ್ ಹೆಗಡೆ