ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023ನೇ ಸಾಲಿನ ತನಿಖೆಯಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ’ಕ್ಕೆ (Union Home Minister’s Medal for Excellence in Investigation) ದೇಶದಲ್ಲಿ 140 ಹಾಗೂ ರಾಜ್ಯದಲ್ಲಿ ಐವರು ಪೊಲೀಸ್ ಅಧಿಕಾರಿಗಳು (Police officers) ಆಯ್ಕೆಯಾಗಿದ್ದಾರೆ. ಅದರಲ್ಲಿ ಶಿವಮೊಗ್ಗದ ಅಧಿಕಾರಿಯೂ ಇದ್ದಾರೆ.
ವಿನೋಬನಗರ ಪೊಲೀಸ್ ಠಾಣೆಯ ಸಿಪಿಐ ರುದ್ರೇಗೌಡ ಆರ್.ಪಾಟೀಲ್ ಅವರು ಪದಕಕ್ಕೆ ಭಾಜನರಾಗಿದ್ದಾರೆ.
READ | ಸ್ವಾತಂತ್ರ್ಯೋತ್ಸವ ಮುನ್ನವೇ ಶಿವಮೊಗ್ಗಕ್ಕೆ ಆಗಮಿಸಿದ ಯುದ್ಧ ಟ್ಯಾಂಕರ್, ಏನಿದರ ವಿಶೇಷ? ಯುದ್ಧ ವಿಮಾನವೂ ಬರಲಿದೆ
ಪದಕಕ್ಕೆ ಭಾಜನರಾಗಲು ಕಾರಣ?
ರುದ್ರೇಗೌಡ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ವೃತ್ತದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಕೊಲೆ ಪ್ರಕರಣವೊಂದನ್ನು ಬೇಧಿಸಿದ್ದರು. ಸೂಳೆಕೆರೆ ಬಳಿಯ ಗುಡ್ಡದ ಕಾಲುವೆ ಹತ್ತಿರ ಮೃತದೇಹವೊಂದು ಪತ್ತೆಯಾಗಿತ್ತು. ಪ್ರಕರಣ ಜಾಡು ಹಿಡಿದು ತನಿಖೆ ನಡೆಸಿದ ಇವರು ಶ್ವಾನದಳದ ಸಹಾಯದಿಂದ ಪ್ರಕರಣವನ್ನು ಬೇಧಿಸಲು ಸಫಲರಾಗಿದ್ದರು. ಇದನ್ನು ಮನಗಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Police raid | ರಾತ್ರೋರಾತ್ರಿ ರೆಸಾರ್ಟ್ ಮೇಲೆ ಪೊಲೀಸರ ದಾಳಿ, ಡಬಲ್ ಬ್ಯಾರಲ್ ಬಂದೂಕು ಸೇರಿ ಅಮೂಲ್ಯ ಸಾಮಗ್ರಿ ಪತ್ತೆ