ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆಕಾಶವಾಣಿ ಭದ್ರಾವತಿ (Akashavani Bhadravathi) ಎಫ್.ಎಂ 103.5 ತರಂಗಾಂತರದಲ್ಲಿ ಪ್ರತಿದಿನ ಇತಿಹಾಸದ ಮಹತ್ವ ತಿಳಿಸುವುದರೊಂದಿಗೆ ಹಲವು ಗಣ್ಯರನ್ನು ಪರಿಚಯಿಸುವ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಅವರ ಜನ್ಮದಿನದಂದೇ ಅವರ ಬಗ್ಗೆ ಮಾಹಿತಿ ತಿಳಿಸುವ ಪ್ರಯತ್ನ ನಡೆಯುತ್ತಿದ್ದು ದಿ: 16-08-2023 ರಂದು ಬೆಳಗ್ಗೆ 9.30 ರಿಂದ 10 ಗಂಟೆವರೆಗೆ ಜಿಲ್ಲೆಯ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಅವರ ವಿಶೇಷ ಸಂದರ್ಶನ ಪ್ರಸಾರವಾಗಲಿದೆ.
ಅವರ ಬಾಲ್ಯದ ಘಟನೆ, ರಾಜಕೀಯ ಪ್ರವೇಶವನ್ನೊಳಗೊಂಡ ಈ ಕಾರ್ಯಕ್ರಮ ಬೆಳಗ್ಗೆ 9.30 ಕ್ಕೆ ಭದ್ರಾವತಿ ಆಕಾಶವಾಣಿ ಎಫ್.ಎಂ 103.5 ಹಾಗೂ MW675khz ಮುಖಾಂತರ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು Prasarbharathi ‘newsonair’ ಆ್ಯಪ್ ನಲ್ಲಿ ಜಗತ್ತಿನಾದ್ಯಂತ ಕೇಳಬಹುದು. ಕೇಳುಗರು ಈ ಕುರಿತು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವಾಟ್ಸಾಪ್ ಸಂಖ್ಯೆ 9481572600 ಮುಖಾಂತರ ಹಂಚಿಕೊಳ್ಳಬಹುದೆಂದು ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ತಿಳಿಸಿದ್ದಾರೆ.
READ | ಸ್ವಾತಂತ್ರ್ಯೋತ್ಸವ ಮುನ್ನವೇ ಶಿವಮೊಗ್ಗಕ್ಕೆ ಆಗಮಿಸಿದ ಯುದ್ಧ ಟ್ಯಾಂಕರ್, ಏನಿದರ ವಿಶೇಷ? ಯುದ್ಧ ವಿಮಾನವೂ ಬರಲಿದೆ
ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
SHIMOGA: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ (Madhu Bangarappa) ಅವರು ಆ.15 ರಂದು ಜಿಲ್ಲಾ ಪ್ರವಾಸ ಕೈಗೊಳ್ಳುವರು.
ಆ.14 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 7.40 ಕ್ಕೆ ಶಿವಪ್ಪ ನಾಯಕ ರೈಲ್ವೆ ನಿಲ್ದಾಣಕ್ಕೆ ಆಗಮಿಸುವರು. ರಾತ್ರಿ ಸೊರಬದಲ್ಲಿ ವಾಸ್ತವ್ಯ ಮಾಡುವರು. ಆ.15 ರ ಬೆಳಗ್ಗೆ 8 ಗಂಟೆಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 9 ಗಂಟೆಗೆ ಡಿಎಆರ್ ಮೈದಾನದಲ್ಲಿ ಆಯೋಜಿಸಲಾಗಿರುವ 77 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸುವರು. ರಾತ್ರಿ 9.30 ಕ್ಕೆ ತಾಳಗುಪ್ಪ ಎಕ್ಸ್ ಪ್ರೆಸ್ ಟ್ರೈನ್ ಮೂಲಕ ನಿರ್ಗಮಿಸುವರು.
National medal | ಶಿವಮೊಗ್ಗದ ಈ ಇನ್’ಸ್ಪೆಕ್ಟರ್ ಗೆ ಗೃಹ ಸಚಿವರ ಮೆಡಲ್, ಕಾರಣವೇನು?