ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 1971ರ ಬಾಂಗ್ಲಾ ವಿಮೋಚನೆಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಬಳಸಿದ ಟಿ-55 ಯುದ್ಧ ಟ್ಯಾಂಕರ್ ಶಿವಮೊಗ್ಗಕ್ಕೆ ತರಲಾಗಿದೆ.
ಪುಣೆಯಲ್ಲಿದ್ದ ಈ ಟ್ಯಾಂಕರ್ ಯುಎಸ್.ಎಸ್.ಆರ್ (ರಷ್ಯಾ) ನಿರ್ಮಿತ ಟ್ಯಾಂಕ್ ಅನ್ನು ಬೇಡಿಕೆಯ ಮೇರೆಗೆ ಕೇಂದ್ರ ರಕ್ಷಣಾ ಇಲಾಖೆಯು ಶಿವಮೊಗ್ಗಕ್ಕೆ ಕಳುಹಿಸಿದೆ.
ಇದು ನಿಷ್ಕ್ರಿಯ ಟ್ಯಾಂಕರ್ ಆಗಿದ್ದು, ದೇಶ ಪ್ರೇಮ ಮತ್ತು ಯುದ್ಧದ ಭೀಕರತೆಯನ್ನು ಪ್ರತಿನಿಧಿಸಲು ನಗರದ ಪ್ರಮುಖ ವೃತ್ತವೊಂದರಲ್ಲಿ ಪ್ರದರ್ಶನಕ್ಕೆ ತರಲಾಗಿದೆ.
ಯುವಕರಲ್ಲಿ ಸೈನ್ಯಕ್ಕೆ ಸೇರ್ಪಡೆ ಆಗಬೇಕೆಂಬ ಮನೋಭಾವ ಬೆಳೆಸಲು ಶಿವಮೊಗ್ಗದ ಮುಖ್ಯ ವೃತ್ತದಲ್ಲಿ ಸ್ಥಾಪಿಸುವ ಉದ್ದೇಶವಿದೆ.
READ | ವಿಐಎಸ್ಎಲ್ ಕಾರ್ಖಾನೆಯ ಬಾರ್ ಮಿಲ್ ಘಟಕ ಪುನರಾರಂಭ ಮುಂದೂಡಿಕೆ, ಕಾರಣವೇನು?
₹25 ಲಕ್ಷ ಮೀಸಲಿಡಲಾಗಿತ್ತು
ಈ ಟ್ಯಾಂಕರ್ ಗಾಗಿ 2022 ರಲ್ಲಿ ಪಾಲಿಕೆ ಬಜೆಟ್ ನಲ್ಲಿ 25 ಲಕ್ಷ ರೂ. ಅನುದಾನ ತೆಗೆದಿರಿಸಲಾಗಿತ್ತು. ಅದನ್ನು ಸಂಸದ ಬಿ.ವೈ.ರಾಘವೇಂದ್ರ ಅವರ ಮೂಲಕ ಕೇಂದ್ರ ರಕ್ಷಣಾ ಇಲಾಖೆಗೆ ಸಲ್ಲಿಸಲಾಗಿತ್ತು.
ಎಲ್ಲಿ ಸ್ಥಾಪನೆ ಇನ್ನೂ ನಿರ್ಧರಿಸಿಲ್ಲ
ನಿಷ್ಕ್ರಿಯವಾಗಿರುವ ಯುದ್ಧ ಟ್ಯಾಂಕರ್ ಅನ್ನು ಎಂ.ಆರ್.ಎಸ್., ಫ್ರೀಡಂ ಪಾರ್ಕ್ ಅಥವಾ ಐಬಿ ವೃತ್ತದಲ್ಲಿ ಪ್ರತಿಷ್ಠಾಪಿಸುವ ಯೋಚನೆ ಇದೆ. ತಮಯುದ್ಧದ ಸಂದರ್ಭದಲ್ಲಿ ಟಿವಿಗಳಲ್ಲಿ ಮಾತ್ರ ವೀಕ್ಷಿಸಿದ್ದ ಯುದ್ಧ ಟ್ಯಾಂಕರ್ ವೊಂದು ಶಿವಮೊಗ್ಗಕ್ಕೆ ಬಂದಿದೆ. ಅದೂ ಸ್ವಾತಂತ್ರ್ಯ ದಿನಾಚರಣೆ ಎರಡು ದಿನಗಳಿರುವಾಗ ಹೀಗಾಗಿ ಸಹಜವಾಗಿಯೇ ಎಲ್ಲರ ಆಕರ್ಷಕಯ ಕೇಂದ್ರವಾಗಿದೆ.
ಶಿವಮೊಗ್ಗ ನಗರಕ್ಕೆ ಸಂತಸ
ಶಿವಮೊಗ್ಗ ನಗರಕ್ಕೆ ಟಿ-55 ಟ್ಯಾಂಕ್ ಸಂತೋಷ ತಂದಿದೆ. ಸ್ವಾತಂತ್ರ್ಯದ 75 ರ ಸಂಭ್ರಮದಲ್ಲಿರುವ ನಾವು ಬಾಂಗ್ಲಾ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡ ಟಿ-55 ನಿಷ್ಕ್ರೀಯ ಯುದ್ಧ ಟ್ಯಾಂಕರ್ ಶನಿವಾರ ನಗರಕ್ಕೆ ತರಲಾಗಿದ್ದು, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಹಾನಗರ ಪಾಲಿಕೆ ಮತ್ತು ನಿವೃತ್ತ ಸೈನಿಕರ ಸಂಘದಿಂದ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
READ | ರಾತ್ರೋರಾತ್ರಿ ರೆಸಾರ್ಟ್ ಮೇಲೆ ಪೊಲೀಸರ ದಾಳಿ, ಡಬಲ್ ಬ್ಯಾರಲ್ ಬಂದೂಕು ಸೇರಿ ಅಮೂಲ್ಯ ಸಾಮಗ್ರಿ ಪತ್ತೆ
ಶಿವಮೊಗ್ಗಕ್ಕೆ ಬರಲಿದೆ ಯುದ್ಧ ವಿಮಾನ
ಯುದ್ಧ ಟ್ಯಾಂಕರ್ ಈಗಾಗಲೇ ಶಿವಮೊಗ್ಗ ತಲುಪಿದೆ. ಬರುವ ದಿನಗಳಲ್ಲಿ ಯುದ್ಧದಲ್ಲಿ ಬಳಸಿದ್ದ ವಿಮಾನವನ್ನು ತರಲಾಗುವುದು. ಈ ನಿಟ್ಟಿನಲ್ಲಿ ಯೋಚನೆ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ 2020 ರಲ್ಲಿ ರಕ್ಷಣಾ ಇಲಾಖೆಗೆ ನಿಷ್ಕ್ರೀಯ ಯುದ್ಧ ಟ್ಯಾಂಕರ್ ಅಥವಾ ವಿಮಾನಗಳನ್ನು ನೀಡುವಂತೆ ಮನವಿ ಮಾಡಿದ್ದೇವು. ಪೂನಾದ ರಕ್ಷಣಾ ಕಾರ್ಯಾಲಯದಿಂದ ಮೂರು ದಿನ ಪ್ರಯಾಣ ಮಾಡಿ ಯುದ್ಧ ಟ್ಯಾಂಕರ್ ನಗರಕ್ಕೆ ಆಗಮಿಸಿದೆ ಎಂದರು.
ಸೈನಿಕ ಇಲಾಖೆಯ ಉಪ ನಿರ್ದೇಶಕ ಹಿರೇಮಠ್, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರನಾಯ್ಕ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್.ಷಡಾಕ್ಷರಿ ಉಪಸ್ಥಿತರಿದ್ದರು.
Elephant day | ಸಕ್ರೆಬೈಲಿನಲ್ಲಿ ಆನೆಗಳಿಗೆ ಅಲಂಕಾರ, ಕಬ್ಬು, ಹಣ್ಣು, ತರಕಾರಿ ಸೇವಿಸಿದ ಗಜರಾಜ, ಏನಿತ್ತು ವಿಶೇಷ?