ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರತಿ ವರ್ಷ ಭಿನ್ನ ಮುಖ್ಯದ್ವಾರ ಮಾಡುವ ಮೂಲಕ ಗಮನ ಸೆಳೆಯುವ ಹಿಂದೂ ಸಂಘಟನೆ ಮಹಾಮಂಡಳ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಶೇಷವೆಂದರೆ, ಈ ಸಲದ ಮುಖ್ಯದ್ವಾರ ಸಿದ್ಧವಾಗಿದ್ದು, ಗಾಂಧಿಬಜಾರ್ ನಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಈ ವರ್ಷ ಉಗ್ರ ನರಸಿಂಹನ ಮುಖ್ಯದ್ವಾರವನ್ನು ಸಿದ್ಧಪಡಿಸಲಾಗಿದ್ದು, ಕ್ರೇನ್ ಸಹಾಯದಿಂದ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
READ | ಹಿಂದೂ ಮಹಾಸಭಾ ಗಣೇಶನ ಈ ಸಲದ ಥೀಮ್ ಏನು? ವೈರಲ್ ಆಯ್ತು ವಿಡಿಯೋ
ಕಳೆದೊಂದು ವಾರದಿಂದ ಕುತೂಹಲ
ಮಹಾದ್ವಾರದ ಪರಿಕಲ್ಪನೆಯ ಬಗ್ಗೆ ಒಂದೊಂದೇ ವಿಡಿಯೋಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅವುಗಳು ಸಾಮಾಜಿಕ ಜಾಲತಾಣದಲ್ಲೂ ಭಾರೀ ವೈರಲ್ ಆಗಿದ್ದವು. ಮಹಾದ್ವಾರಕ್ಕೆ ಯಾವ ಪರಿಕಲ್ಪನೆಯ ಆಧಾರದ ಮೇಲೆ ಅಲಂಕರಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಅದಕ್ಕೆ ಮಂಗಳವಾರ ತೆರೆಬಿದ್ದಿದೆ.
ಮೂರ್ತಿ ಬಂದಿದ್ದೇ ಚಿತ್ರೀಕರಣ
ಉಗ್ರ ನರಸಿಂಹನ ಮೂರ್ತಿಯನ್ನು ಗಾಂಧಿ ಬಜಾರಿಗೆ ತಂದಿದ್ದೇ ಭಾರಿ ಸಂಖ್ಯೆಯಲ್ಲಿ ಜನರು ಸೇರಿ ಅದರ ವಿಡಿಯೋ ಮಾಡಿಕೊಳ್ಳಲಾರಂಭಿಸಿದರು. ಕ್ರೇನ್ ಸಹಾಯದಿಂದ ಪ್ರವೇಶ ದ್ವಾರದ ಮೇಲೆ ಪ್ರತಿಷ್ಠಾಪಿಸಲಾಯಿತು.
READ | ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಪರ್ಯಾಯ ಮಾರ್ಗಕ್ಕೆ ಜಿಲ್ಲಾಡಳಿತ ಆದೇಶ
ನಗರವೆಲ್ಲ ಕೇಸರಿಮಯ
ಪ್ರವೇಶ ದ್ವಾರ ಮಾತ್ರವಲ್ಲದೇ ಹಿಂದೂ ಸಂಘಟನೆ ಮಹಾಮಂಡಳದ ಗಣಪತಿ ಸಾಗುವ ರಾಜಬೀದಿಯುದ್ದಕ್ಕೂ ಅಲಂಕಾರ ಸಮಿತಿಯು ಕೇಸರಿ ಬಂಟಿಂಗ್ಸ್ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದೆ. ಅಮೀರ್ ಅಹಮದ್ ವೃತ್ತದಿಂದ ನೆಹರೂ ರಸ್ತೆಗೆ ಸಂಪರ್ಕಿಸುವ ಮಾರ್ಗದಲ್ಲೂ ದ್ವಾರ ಸಿದ್ಧಪಡಿಸಲಾಗಿದೆ. ಎಎ ವೃತ್ತವನ್ನೂ ಅಲಂಕರಿಸಲಾಗಿದೆ.
ಮೆರವಣಿಗೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಗೋಪಿ ವೃತ್ತದಲ್ಲಿಯೇ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುವುದಕ್ಕಾಗಿ ಪ್ರತ್ಯೇಕ ಮತ್ತು ಎತ್ತರದ ಸ್ಥಳಗಳನ್ನು ಮಾಡಲಾಗಿದೆ.