ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಮಾರಿಗುಡಿ ಸಮೀಪದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳವಿಗೆ ಮಂಗಳವಾರ ರಾತ್ರಿ ಯತ್ನ ನಡೆದಿದೆ.
ಗ್ರಾಮದಲ್ಲಿ ಅಮ್ಮನ ಕಳುಹಿಸುವ ಧಾರ್ಮಿಕ ಕಾರ್ಯಕ್ಕೆಂದು ಜನರು ಊರು ಹೊರವಲಯಕ್ಕೆ ಹೋಗಿದ್ದರು. ಆಗ ಸಮಯ ಸಾಧಿಸಿದ ದುಷ್ಕರ್ಮಿಗಳು ಬ್ಯಾಂಕ್ ದರೋಡೆಗೆ ಯತ್ನಿಸಿದ್ದಾರೆ.
READ | ಗಿಳಿಶಾಸ್ತ್ರ ಹೇಳುತ್ತಿದ್ದವರ ಬಂಧನ | ಬೈಕ್ ಸವಾರ ಸ್ಥಳದಲ್ಲೇ ಸಾವು
ಸೈರನ್ ಮೊಳಗಿದ್ದೇ ಎಸ್ಕೇಪ್
ಬ್ಯಾಂಕ್ ಲೂಟಿ ಮಾಡುವುದಕ್ಕೆ ಬಂದಿದ್ದ ಕಳ್ಳರು ತಡರಾತ್ರಿ ಬಾಗಿಲು ಮುರಿದು ಒಳಗಡೆ ಪ್ರವೇಶಿಸಿದ್ದೇ ಬ್ಯಾಂಕಿನ ಸೈರನ್ ಮೊಳಗಲಾರಂಭಿಸಿದೆ. ಗಾಬರಿಯಲ್ಲಿ ಹಾರೆಕೋಲು ಮತ್ತಿತರ ಆಯುಧಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಶ್ವಾನದಳ
ಘಟನಾ ಸ್ಥಳಕ್ಕೆ ಶ್ವಾನದಳದೊಂದಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.