ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಮಲವಗೊಪ್ಪ (Malavagoppa) ದಿಂದ ಶುಗರ್ ಪ್ಯಾಕ್ಟರಿಗೆ (sugar factory) ಸೇರಿದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ (ganja sale) ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
READ | ಕೋವಿಡ್ ಚಿಕಿತ್ಸೆ ಪಡೆದ ವೈದ್ಯನಿಗೇ ಪರಿಹಾರ ನೀಡಲು ವಿಮಾ ಕಂಪೆನಿ ಹಿಂದೇಟು, ಗ್ರಾಹಕರ ನ್ಯಾಯಾಲಯ ಮಹತ್ವದ ತೀರ್ಪು
ಭದ್ರಾವತಿ (bhadravathi)ಯ ಅನ್ವರ್ ಕಾಲೋನಿ ವಾಸಿ ಸುಹೇಲ್ ಖಾನ್ ಅಲಿಯಾಸ್ ಪಿನ್ನಿ(20), ಮೊಹಮ್ಮದ್ ಗೌಸ್ ಅಲಿಯಾಸ್ ಗುಂಡ(23), ಖಾಝಿ ಮೊಹಲ್ಲಾದ ಖಲೀಲ್ ಅಹಮದ್ ಅಲಿಯಾಸ್ ಕಾಲು(25), ಎಕಿನ್ಸಾ ಕಾಲೋನಿಯ ಸೈಯದ್ ಹಸೈನ್ ಅಲಿಯಾಸ್ ಜಂಗ್ಲಿ ಅಲಿಯಾಸ್ ಸಾಹಿಲ್(23) ಎಂಬುವವರನ್ನು ಬಂಧಿಸಿದ್ದಾರೆ.
ಆರೋಪಿಗಳ ಬಳಿ ಸಿಕ್ತು ರಾಶಿ ರಾಶಿ ಗಾಂಜಾ
ಆರೋಪಿತರಿಂದ ಅಂದಾಜು ₹2,25,000 ಮೌಲ್ಯದ ಒಟ್ಟು
4 ಕೆಜಿ 470 ಗ್ರಾಂ ತೂಕದ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆ ಕೈಗೊಂಡ ತಂಡ
ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಎ.ಜಿ. ಕಾರಿಯಪ್ಪ ಮಾರ್ಗದರ್ಶದಲ್ಲಿ, ಸಿಇಎನ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರು ಎಂ.ಎಸ್.ದೀಪಕ್ ನೇತೃತ್ವದಲ್ಲಿ ಸಿಬ್ಬಂದಿ ಧರ್ಮಾನಾಯ್ಕ್, ಡಿ.ಆರ್.ಚಂದ್ರಶೇಖರ್, ಬಿ.ಎಸ್.ಕರಿಬಸಪ್ಪ, ಫಿರ್ದೋಸ್ ಅಹಮ್ಮದ್, ಬಿ.ರವಿ, ಡಿ.ಎನ್.ಚಿದಂಬರ್, ಚಾಲಕರಾದ ಪ್ರಕಾಶ್ ನಾಯ್ಕ್ ಅವರನ್ನು ಒಳಗೊಂಡ ತಂಡವು ದಾಳಿ ನಡೆಸಿ ಆರೋಪಗಳನ್ನು ಬಂಧಿಸಿದೆ.