ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಲಷ್ಕರ್ ಮೊಹಲ್ಲಾದ ಅನಿಸೂರ್ ಇಸ್ಲಾಂ ಎಂಬುವವರ ಚಿನ್ನ ಬೆಳ್ಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಪಶ್ಚಿಮ ಬಂಗಾಳದ ಅದಿತೋ ಮಾಜಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜ.4ರಂದು ಅಂಗಡಿಯಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಸಿ ಮಾಲೀಕರು ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡ ಆರೋಪಿಯನ್ನು ಕೋಲ್ಕತ್ತದಲ್ಲಿ ಬಂಧಿಸಲಾಗಿದೆ.
ಹಲವು ಠಾಣೆಗಳಲ್ಲಿ ವಾಂಟೆಡ್
ಆರೋಪಿ ಖಜಿರ್ದೋ ಗ್ರಾಮದ ಅದಿತೋ ಮಾಜಿ ಅಲಿಯಾಸ್ ಆದಿತ್ಯಾನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪುನಾ ಪೊಲೀಸ್ ವಶಕ್ಕೆ ಪಡೆದು ಆರೋಪಿತನಿಂದ ಕೊಲ್ಕತ್ತಾದಲ್ಲಿ ಅಂದಾಜು ₹2,70,000/- ಮೌಲ್ಯದ 45 ಗ್ರಾಂ ದ ಬಂಗಾರದ ಆಭರಣ, ಹೈದರಾಬಾದ್ ಮತ್ತು ಸಿಕಂದರಬಾದ್ ನಲ್ಲಿ ಅಂದಾಜು ₹5,75,000 ಮೌಲ್ಯದ ಒಟ್ಟು 85 ಗ್ರಾಂ ಬಂಗಾರ ಸೇರಿ ಒಟ್ಟು ಅಂದಾಜು ₹8,45,000 ಮೌಲ್ಯದ 130 ಗ್ರಾಂ ತೂಕದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಆರೋಪಿ ಮತ್ತು ಕಳವಾದ ಚಿನ್ನಾಭರಣ ಪತ್ತೆಗಾಗಿ ಎಸ್.ಪಿ. ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಎ.ಜಿ. ಕಾರಿಯಪ್ಪ ಎ.ಜಿ ಮಾರ್ಗದರ್ಶದಲ್ಲಿ ಡಿವೈಎಸ್.ಪಿ ಬಿ. ಬಾಲರಾಜ್ ಮೇಲ್ವಿಚಾರಣೆಯಲ್ಲಿ ಕೋಟೆ ಠಾಣೆಯ ಪಿಐ ರವಿ ಪಾಟೀಲ್ ನೇತೃತ್ವದ, ಪಿಎಸ್.ಐ ಕುಮಾರ್, ಸಿ.ಆರ್.ಕೊಪ್ಪದ್, ಎಎಸ್.ಐ ಟಿ.ಶ್ರೀಹರ್ಷ, ಸಿಬ್ಬಂದಿ ಎಚ್.ಸಿ.ಅಣ್ಣಪ್ಪ, ನಾಗರಾಜ, ಆಂಜನಪ್ಪ, ಕಿಶೋರ, ಜಯಶ್ರೀ ತಂಡ ಕಾರ್ಯಾಚರಣೆ ನಡೆಸಿದೆ.
Adoption Process | ಮಕ್ಕಳಿಲ್ಲವೇ, ಚಿಂತೆ ಬೇಡ, ಇಲ್ಲಿದೆ ಪೋಷಕರ ಮಡಿಲು ತುಂಬುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ