ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಬ್ಬಲಗೆರೆ ಕೆರೆ (abbalagere lake)ಯ ಹೂಳನ್ನು ಅಕ್ರಮವಾಗಿ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ (shimoga zilla panchayat) ಬಂಧನಕ್ಕೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ವಾರೆಂಟ್ ಹೊರಡಿಸಿದೆ.
READ | 4 ಕ್ವಿಂಟಾಲ್ ಮೆಣಸು ತೆಗೆದುಕೊಂಡು ಎಸ್ಕೇಪ್, ಮೂವರು ಅರೆಸ್ಟ್
ಏನಿದು ಪ್ರಕರಣ, ಯಾವ ಕಾರಣಕ್ಕೆ ವಾರೆಂಟ್?
ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಖಾಸಗಿ ಬಡಾವಣೆ ನಿರ್ಮಾಣಕ್ಕೆ ನೆಲ ಸಮತಟ್ಟು ಮಾಡುವುದಕ್ಕಾಗಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ನಷ್ಟ ಉಂಟು ಮಾಡಿರುವುದಾಗಿ ಕಾಂಗ್ರೆಸ್ ಮುಖಂಡ ಜಗದೀಶ್ ಎಂಬುವವರು ದೂರು ನೀಡಿದ್ದರು.
ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡಿತ್ತು. ತನಿಖೆ ನಡೆಸಿದ ಜಿಪಂ ಕಾರ್ಯಪಾಲಕ ಇಂಜಿನಿಯರ್, 500 ಲೋಡ್ ಮಣ್ಣು ತೆಗೆಯಲು ₹56 ಸಾವಿರ ಮಾತ್ರ ಪಾವತಿಸಲಾಗಿದೆ. ಆದರೆ, ₹72 ಲಕ್ಷ ರಾಜಧನದಷ್ಟು 15 ಸಾವಿರ ಲೋಡ್ ಫಲವತ್ತಾದ ಮಣ್ಣು ಸಾಗಿಸಲಾಗಿದೆ ಎಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆಯಾಗಿದೆ.
ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು ನವೆಂಬರ್ 24ರಂದು ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ವರದಿ ಸಲ್ಲಿಸದ್ದಕ್ಕೆ ಬಂಧನದ ವಾರೆಂಟ್ ಹೊರಡಿಸಲಾಗಿದೆ.
ಬಂಧನದ ವಾರೆಂಟ್
ನ್ಯಾಯಾಲಯವು ಡಿ.21ರಂದು ಬಂಧನದ ವಾರೆಂಟ್ ಹೊರಡಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಪಂ ಸಿಇಒಗೆ ದಸ್ತಗಿರಿ ಮಾಡಲು ಶಿವಮೊಗ್ಗ ಪೊಲೀಸರಿಗೆ ಆದೇಶಿಸಿರುವ ನ್ಯಾಯಾಲಯವು ಫೆಬ್ರವರಿ 16 ರಂದು ಬೆಳಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ₹25 ಸಾವಿರ ಮುಚ್ಚಳಿಕೆ ಬರೆದುಕೊಡಬೇಕು ತಿಳಿಸಲಾಗಿದೆ.