ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹೈಕೋರ್ಟ್ ಆದೇಶದಂತೆ ಸಾರಿಗೆ ನೌಕರರು ಮುಷ್ಕರವನ್ನು ತಾತ್ಕಾಲಿಕ ಹಿಂದೆ ಪಡೆದಿದ್ದಾರೆ. ಹೀಗಾಗಿ, ಗುರುವಾರದಿಂದ (ಏಪ್ರಿಲ್ 22) ಎಲ್ಲ ಸರ್ಕಾರಿ ಬಸ್ ಗಳ ಸೇವೆ ಸಾರ್ವಜನಿಕರಿಗೆ ಸಿಗಲಿದೆ.
READ | ವಿಟಿಯು ಪರೀಕ್ಷೆ ಮುಂದೂಡಿಕೆ ಇಲ್ಲ, ವೇಳಾಪಟ್ಟಿಯಂತೆಯೇ ನಡೆಯಲಿವೆ ಪರೀಕ್ಷೆ
ಶಿವಮೊಗ್ಗ ವಿಭಾಗದಿಂದ ಬೆಂಗಳೂರು, ದಾವಣೆಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಮಂಗಳೂರು, ಉತ್ತರ ಕರ್ನಾಟಕದ ವಿವಿಧೆಡೆ ಸೇರಿದಂತೆ ಜಿಲ್ಲೆಯೊಳಗೂ ಬಸ್ ಸಂಚಾರ ಶುರುವಾಗಲಿದೆ.
ಆರನೇ ವೇತನ ಆಯೋಗದನ್ವಯ ಸಂಬಳ ನೀಡುವುದು ಸೇರಿ ವಿವಿಧ ಬೇಡಿಕೆಗಳ ಪೂರೈಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸಿದ ಮುಷ್ಕರ ಎರಡು ವಾರ ಪೂರೈಸಿದೆ. ಸರ್ಕಾರ ನಾನಾ ಹಂತದಲ್ಲಿ ಒತ್ತಡಗಳನ್ನು ಹೇರಿದರೂ ಅದಕ್ಕೆ ಬಾಗದೇ ಮುಷ್ಕರ ನಡೆಸಲಾಗಿದೆ. ನ್ಯಾಯಾಲಯದಲ್ಲಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅನ್ವಯ ನ್ಯಾಯಾಲಯವು ಕರ್ತವ್ಯಕ್ಕೆ ವಾಪಸ್ ಬರುವಂತೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ನೌಕರರು ಕರ್ತವ್ಯಕ್ಕೆ ಮರಳಲಿದ್ದಾರೆ. ಗುರುವಾರ ಸಾರಿಗೆ ಸಂಸ್ಥೆಯ ಪೂರ್ಣ ಸೇವೆ ಜನರಿಗೆ ಸಿಗಲಿದೆ.
ಕೋವಿಡ್ ಮಾರ್ಗಸೂಚಿ ಅನ್ವಯ ಬಸ್ ಸಂಚಾರ | ಸರ್ಕಾರ ನೂತನ ಮಾರ್ಗಸೂಚಿ ಅನ್ವಯ ಬಸ್ ಗಳಲ್ಲಿ ಶೇ.50 ಪ್ರಯಾಣಿಕರ ಸಂಚಾರಕ್ಕೆ ಅನುಮತಿ ನೀಡಿದೆ. ಹೀಗಾಗಿ, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಹಾಗೂ ಬಸ್ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಿಯೇ ಪ್ರಯಾಣಿಕರನ್ನು ಬಸ್ ಹತ್ತಲು ಅವಕಾಶ ನೀಡಲಾಗುವುದು.
ಮುಷ್ಕರ ಹಿಂಪಡೆದ ದಿನವೇ ಶೇ.80ರಷ್ಟು ಬಸ್ ಸಂಚಾರ | ನ್ಯಾಯಾಲಯದ ಆದೇಶ ನೀಡಿದ್ದೇ ಎರಡನೇ ಶಿಫ್ಟ್ ನಲ್ಲಿದ್ದ ಸಿಬ್ಬಂದಿ ಕರ್ತವ್ಯಕ್ಕೆ ಆಗಮಿಸಿದ್ದಾರೆ. ತಕ್ಷಣ ನಿಯೋಜನೆ ಮಾಡಿದ್ದು ಬಸ್ ಓಡಿಸಲಾಗಿದೆ. ಬುಧವಾರ ಸಂಜೆಯ ಹೊತ್ತಿಗೆ ಶೇ.80ರಷ್ಟು ಬಸ್ ಸಂಚರಿಸಿವೆ.
https://www.suddikanaja.com/2021/02/04/wild-elephant-combing-at-umblebailu/