ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಕಾಡುಕೋಣವೊಂದರ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಾಲೂಕಿನ ಮೇಲಿನಕುರುವಳ್ಳಿ ಬಳಿಯ ವಿಠಲನಗರ ಮತ್ತು ವಾಟಗಾರು ಮಾರ್ಗದ ಅರಣ್ಯ ಪ್ರದೇಶದಲ್ಲಿ ಮೃತದೇಹ ಸಿಕ್ಕಿದೆ.
ಶವ ಸಿಕ್ಕಿರುವ ಜಾಗದಲ್ಲಿ ಅರಣ್ಯ ಪ್ರದೇಶ ಸುಟ್ಟಿರುವುದು ಕಂಡುಬಂದಿದ್ದು, ಒಂದು ವಾರದ ಅವಧಿಯಲ್ಲಿಇದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಕಾಡುಕೋಣದ ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ.