ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಹೊಸಹಳ್ಳಿ ಗ್ರಾಮದ 40 ವರ್ಷದ ಲತಾಬಾಯಿ ಎಂಬಾಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
READ | ಭದ್ರಾವತಿಯಲ್ಲಿ ಮೊದಲ ಸಲ ಭಾರಿ ಕಡಿಮೆ ಕೊರೊನಾ ಪ್ರಕರಣ, ಸೊರಬದಲ್ಲಿ 2ನೇ ದಿನವೂ ಶೂನ್ಯ ಸೋಂಕು
ಬಳ್ಳಾರಿ ಜಿಲ್ಲೆಯ ಕೊಮಾರನಹಳ್ಳಿ ತಾಂಡ ನಿವಾಸಿ ದೇವೇಂದ್ರ ನಾಯ್ಕ್ (27) ಬಂಧಿತ. ಎನ್.ಟಿ. ರಸ್ತೆಯ ಗಾಜನೂರು ಬಸ್ ನಿಲ್ದಾಣದಲ್ಲಿ ಮಹಿಳೆಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿತ್ತು.
ಏನಿದು ಪ್ರಕರಣ | ಲತಾಬಾಯಿ ಜತೆ ಕಳೆದ ಹತ್ತು ತಿಂಗಳುಗಳಿಂದ ದೇವೇಂದ್ರ ಸಂಬಂಧ ಹೊಂದಿದ್ದರು. ಜುಲೈ 1ರಂದು ಮದ್ಯ ಕುಡಿಯುವ ವಿಚಾರದಲ್ಲಿ ಇಬ್ಬರಿಗೂ ಗಲಾಟೆಯಾಗಿದೆ.
READ | ಎಸ್.ಎಸ್.ಎಲ್.ಸಿ ಅಣಕು ಪರೀಕ್ಷೆಗೆ ಡೇಟ್ ಫಿಕ್ಸ್, ಪರೀಕ್ಷೆ ಬರೆಯುವುದು ಕಡ್ಡಾಯವೇ?
ಜುಲೈ 2ರಂದು ಬೆಳಗಿನ ಜಾವ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ಶವ ಸಿಕ್ಕಿದೆ. ಐಪಿಸಿ ಸೆಕ್ಷನ್ 307 ಅನ್ವಯ ಪ್ರಕರಣ ದಾಖಲಾಗಿದೆ.