ಸುದ್ದಿ ಕಣಜ.ಕಾಂ | TALUK | ISSURU
ಶಿಕಾರಿಪುರ: ತಾಲೂಕಿನ ಈಸೂರು ಗ್ರಾಮದಲ್ಲಿ ಯೋಧರ ನೆನಪಿಗಾಗಿ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರ 4.95 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ.
ತಾಯ್ನಾಡಿಗೆ ಸ್ವಾತಂತ್ರ್ಯ ದೊರಕಿಸಿ ಕೊಡುವುದಕ್ಕಾಗಿ ಹೋರಾಟ ಮಾಡಿ ಹುತಾತ್ಮರಾಗಿದ್ದರು.
ಹೇಗಿರಲಿದೆ ಈಸೂರು ಗ್ರಾಮದಲ್ಲಿನ ಸ್ಮಾರಕ?
ಸ್ಮಾರಕ ಭವನವು ಅರ್ಧ ವೃತ್ತಾಕಾರದಲ್ಲಿ ಇರಲಿದೆ. ಐದು ಸ್ಮಾರಕಗಳನ್ನು ಹುತಾತ್ಮರ ಜೀವನ ಚರಿತ್ರೆ ವಿವರಗಳೊಂದಿಗೆ ನಿರ್ಮಿಸಲು ಯೋಜಿಸಲಾಗಿದೆ.
ಇದರೊಂದಿಗೆ ತಾಯ್ನಾಡಿನ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿವಿಧ ಹುತಾತ್ಮರ ಜೀವನ ಚರಿತ್ರೆಯ ಪುಸ್ತಕಗಳ ಭಂಡಾರವಿರುವ ನವೀನ ರೀತಿಯ ಚೊಕ್ಕದಾದ ಗ್ರಂಥಾಲಯ ಹಾಗೂ ವಿವಿಧ ಕೋನಗಳಲ್ಲಿ ಪ್ರೇಕ್ಷಕರ ಸಾಮಥ್ರ್ಯಕ್ಕೆ ಅನುಗುಣವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುವಾಗುವಂತೆ ಬಯಲು ರಂಗಮಂದಿರ ನಿರ್ಮಿಸಲಾಗುವುದು.
ಸ್ಮಾರಕ ಭವನಕ್ಕೆ ಕಳೆ ನೀಡುವಂತೆ ಅತ್ಯಾಕರ್ಷಕ ಉದ್ಯಾನ ನಿರ್ಮಿಸಲಾಗುವುದು. ಜತೆಗೆ, ಸಂದರ್ಶಕರು ಸಂದರ್ಶಿಸಲು ಅನುಕೂಲವಾಗುವಂತೆ ಕುಳಿತುಕೊಳ್ಳಲು ಆಸನ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುವುದು.