ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಬೇಕರಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕುಂಸಿ ಕಡೆಯಿಂದ ಶಿವಮೊಗ್ಗಕ್ಕೆ ಬರುವಾಗ ಬುಧವಾರ ರಾತ್ರಿ ಅಪಘಾತ ಸಂಭವಿಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೋಮಿನಕೊಪ್ಪ ನಿವಾಸಿ ನಾಗೇಂದ್ರ(34) ಮೃತರು. ಒಪ್ರತಿ ದಿನ ನಾಗೇಂದ್ರ ಅವರು ಬೇಕರಿ ಪದಾರ್ಥಗಳನ್ನು ಶಿವಮೊಗ್ಗದಿಂದ ಕುಂಸಿ, ಆಯನೂರು ಭಾಗಗಳಿಗೆ ನೀಡಿ ವಾಪಸ್ ಬರುತಿದ್ದರು. ಇಂದೂ ಸಹ ಕಾರಿನಲ್ಲಿ ಬರುವಾಗ ಸಿಮೆಂಟ್ ತುಂಬಿದ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ತಾಲೂಕಿನ ಸಿಂಹ ಧಾಮ ಸಮೀಪದ ಮುದ್ದಿನಕೊಪ್ಪ ಟ್ರಿಪಾರ್ಕ್ ಬಳಿ ಅಪಘಾತ ಸಂಭವಿಸಿದ್ದು, ಅಪಘಾತದ ಭೀಕರತೆಗೆ ಕಾರು ನಜ್ಜುಗುಜ್ಜಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.