ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಡಿಕೆಶಿಯೇ ಏಕೆ? ಬಿಜೆಪಿ ಮುಖಂಡರ ಬಳಿ ಶಿಕ್ಷಣ ಸಂಸ್ಥೆಗಳೇ ಇಲ್ಲವೇ? ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಗುಡುಗಿದರು.
ನಗರದ ಮಹಾವೀರ ವೃತ್ತದಲ್ಲಿ ಮಂಗಳವಾರ ನಡರದ ಪ್ರತಿಭಟನೆಯಲ್ಲಿ ಮಾತನಾಡಿದ ಸುಂದರೇಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ (Central Bureau of Investigation) ದಾಳಿ ಮಾಡಿದ್ದು, ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ವಿಪಕ್ಷಗಳನ್ನು ಹತ್ತಿಕ್ಕಲು ಸಿಬಿಐ, ಇಡಿ (Enforcement Directorate), ಐಟಿ (Income Tax) ಸೇರಿದಂತೆ ಕೇಂದ್ರದ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
READ | ಡಿಕೆಶಿ ಮೇಲೆ ಸಿಬಿಐ ದಾಳಿ ವಿರುದ್ಧ ಯುವ ಕಾಂಗ್ರೆಸ್ ಕಿಡಿ, ಬಿಜೆಪಿಗೆ ಎಚ್ಚರಿಕೆ
ವಿಪಕ್ಷದ ದನಿ ಅಡಗಿಸುವ ಪ್ರಯತ್ನ
ರಾಜ್ಯದಲ್ಲಿ ಪ್ರಭಾವಿ ಮುಖಂಡರ ಮೇಲೆ ಈ ರೀತಿ ದಾಳಿಗಳನ್ನು ನಡೆಸುವ ಮೂಲಕ ವಿಪಕ್ಷದ ದನಿ ಅಡಗಿಸುವ ಯತ್ನ ನಡೆದಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 150 ಸೀಟುಗಳನ್ನು ಗೆಲ್ಲುವ ಭರವಸೆ ಇದ್ದು, ಈ ಕಾರಣಕ್ಕೆ ಮುಖಂಡರನ್ನು ಹತ್ತಿಕ್ಕುವ ಯತ್ನ ನಡೆದಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ರೇಖಾ ರಂಗನಾಥ್, ವಿಜಯಲಕ್ಷ್ಮೀ ಪಾಟೀಲ್, ಕೆ.ಬಿ.ಪ್ರಸನ್ನಕುಮಾರ್, ಎಚ್.ಸಿ. ಯೋಗೇಶ್, ಎಸ್.ಕೆ. ಮರಿಯಪ್ಪ, ರಮೇಶ್ ಶಂಕರಘಟ್ಟ, ಜಿ.ಡಿ.ಮಂಜುನಾಥ್, ವಿ. ನಾರಾಯಣ ಸ್ವಾಮಿ, ಚಂದ್ರಭೂಪಾಲ್, ರಂಗನಾಥ್, ಎಚ್.ಪಿ.ಗಿರೀಶ್, ಮಧುಸೂದನ್, ಚೇತನ್, ಚರಣ್, ಹರ್ಷಿತ್, ವಿನಾಯಕಮೂರ್ತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
https://suddikanaja.com/2022/12/20/railway-recruitment-cell-rrc-notification-for-the-recruitment/