ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಲ್ಲಿ ನಡೆದ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ನೇಪಾಳ (Nepal) ಮತ್ತು ರಾಜಸ್ಥಾನ(Rajasthan)ದಲ್ಲಿ ಪತ್ತೆ ಹಚ್ಚುವ ಮೂಲಕ ಖಾಕಿ ಪಡೆ ಭೇಷ್ ಎನಿಸಿಕೊಂಡಿದೆ.
ಪ್ರಕರಣ 1
ಭದ್ರಾವತಿ(Bhadravathi)ಯಲ್ಲಿ ಚಿನ್ನಾಭರಣಗಳ ಅಂಗಡಿಗೆ ಕನ್ನ ಹಾಕಿದ್ದ ಪ್ರಕರಣ ಸಂಬಂಧ ಐದು ಜನ ಆರೋಪಿಗಳನ್ನು ನೇಪಾಳದಲ್ಲಿ ಪತ್ತೆ ಹಚ್ಚಲಾಗಿದೆ. ಇದಕ್ಕಾಗಿ ಶಿವಮೊಗ್ಗ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿತ್ತು.
READ | ಸಂಸತ್ ಅಧಿವೇಶನದಲ್ಲಿ ಅಡಿಕೆ ಬೆಲೆ ಏರಿಕೆ ಬಗ್ಗೆ ಗಂಭೀರ ಚರ್ಚೆ, ಸಂಸದ ರಾಘವೇಂದ್ರ ಪ್ರಸ್ತಾಪಿಸಿದ ಟಾಪ್ 4 ವಿಚಾರಗಳಿವು
ಪ್ರಕರಣ 2
ಶಿವಮೊಗ್ಗದಲ್ಲಿ ಒಂದೇ ದಿನ ಸರಣಿ ಸರ ಅಪಹರಣ ಘಟನೆಗಳು ನಡೆದಿದ್ದವು. ಕೋಟೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ರಾಜಸ್ಥಾನದಲ್ಲಿ ಹುದುಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
286 ಕಳವು ಪ್ರಕರಣ, 4.32 ಕೋಟಿ ರೂ. ಮೌಲ್ಯ
ಈ ಎಲ್ಲ ವಿಚಾರಗಳು ನಗರದ ಡಿಎಆರ್ ಮೈದಾನದಲ್ಲಿ ಪೊಲೀಸ್ ಇಲಾಖೆ ನಡೆಸಿದ ಪ್ರಾಪರ್ಟಿ ಪರೇಡ್(property return parade)ನಲ್ಲಿ ಬೆಳಕಿಗೆ ಬಂದಿವೆ.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ 45 ಪ್ರಕರಣಗಳೂ ಸೇರಿ ಒಟ್ಟು 283 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ ಅಂದಾಜು 4.33 ಕೋಟಿ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು, ಬಂಗಾರದ ಆಭರಣ, ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ಮಾಲೀಕರಿಗೆ ವಾಪಸ್ ನೀಡಲಾಯಿತು.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಎಸ್ಪಿ ವಿಕ್ರಂ ಆಮ್ಟೆ, ಭದ್ರಾವತಿ ಎಎಸ್ಪಿ ಜಿತೇಂದ್ರ ಕುಮಾರ್, ಡಿವೈಎಸ್ಪಿ ಬಾಲರಾಜು ಉಪಸ್ಥಿತರಿದ್ದರು.
https://suddikanaja.com/2022/12/15/shivamogga-town-mgr-chennai-central-bi-weekly-express-special-train-period-extension/